ADVERTISEMENT

ದಕ್ಷಿಣ ಆಫ್ರಿಕಾ ಎ ವಿರುದ್ಧದ ‘ಟೆಸ್ಟ್’ ಸರಣಿಗೆ ರಿಷಭ್ ಪಂತ್‌ ನಾಯಕ

ಪಿಟಿಐ
Published 21 ಅಕ್ಟೋಬರ್ 2025, 11:42 IST
Last Updated 21 ಅಕ್ಟೋಬರ್ 2025, 11:42 IST
   

ನವದೆಹಲಿ: ದಕ್ಷಿಣ ಆಫ್ರಿಕಾ ಎ ವಿರುದ್ಧದ ಎರಡು ಪಂದ್ಯಗಳ ‘ಟೆಸ್ಟ್’ ಸರಣಿಗೆ ಭಾರತ ಎ ತಂಡದ ನಾಯಕರಾಗಿ ವಿಕೆಟ್‌ ಕೀಪರ್‌ ಬ್ಯಾಟರ್‌ ರಿಷಭ್ ಪಂತ್‌ ಅವರನ್ನು ಮಂಗಳವಾರ ಆಯ್ಕೆಮಾಡಲಾಗಿದೆ.

ಜುಲೈನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಟೆಸ್ಟ್‌ ಸರಣಿಯಲ್ಲಿ ಗಾಯಗೊಂಡಿದ್ದ ಪಂತ್‌, ಏಷ್ಯಾ ಕಪ್‌ ಹಾಗೂ ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು.

ರಿಷಭ್ ಪಂತ್‌ ಅವರು ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಗೂ ಮುನ್ನ ಅ.30 ರಿಂದ ಆರಂಭವಾಗಲಿರುವ ‘ಟೆಸ್ಟ್’ ಸರಣಿಗೆ ಅವರನ್ನು ಭಾರತ ಎ ತಂಡದ ನಾಯಕರನ್ನಾಗಿ ಆಯ್ಕೆಮಾಡಲಾಗಿದೆ ಎಂದು ಆಯ್ಕೆಮಂಡಳಿ ತಿಳಿಸಿದೆ.

ADVERTISEMENT

ಪ್ರಮುಖ ಬ್ಯಾಟರ್‌ಗಳಾದ ಕೆ.ಎಲ್‌. ರಾಹುಲ್, ಸಾಯಿ ಸುದರ್ಶನ್‌, ದೇವದತ್‌ ಪಡಿಕ್ಕಲ್‌, ಧ್ರುವ್‌ ಜುರೇಲ್‌ ಹಾಗು ಬೌಲರ್‌ಗಳಾದ ಮೊಹಮ್ಮದ್‌ ಸಿರಾಜ್‌, ಪ್ರಸಿದ್‌ ಕೃಷ್ಣ ಭಾರತ ಎ ತಂಡದಲ್ಲಿ ಸ್ಥಾನಪಡೆದಿದ್ದಾರೆ.

ನ.14 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಭಾರತವು 2 ಟೆಸ್ಟ್‌, 3 ಏಕದಿನ ಹಾಗೂ 5 ಟಿ–20 ಪಂದ್ಯಗಳನ್ನು ಆಡಲಿದೆ. ಅದಕ್ಕೂ ಮೊದಲು ಎ ತಂಡಗಳು ಎರಡು ‘ಟೆಸ್ಟ್’ ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿವೆ.

ಮೊದಲ ಪಂದ್ಯಕ್ಕೆ ಭಾರತ ಎ ತಂಡ: ರಿಷಭ್ ಪಂತ್‌(ನಾಯಕ), ಆಯುಷ್‌ ಮ್ಹಾತ್ರೆ, ಎನ್‌.ಜಗದೀಸನ್‌ (ವಿಕೆಟ್‌ ಕೀಪರ್‌), ಸಾಯಿ ಸುದರ್ಶನ್‌(ಉಪ ನಾಯಕ) ದೇವದತ್‌ ಪಡಿಕ್ಕಲ್‌, ರಜತ್‌ ಪಾಟೀದಾರ್, ಹರ್ಷ್‌ ದುಬೆ, ತನುಷ್‌ ಕೋಟ್ಯಾನ್‌, ಮಾನವ್‌ ಸುತಾರ್‌, ಅನ್ಶುಲ್‌ ಕಾಂಬೊಜ್‌, ಯಶ್‌ ಠಾಕೂರ್‌, ಆಯುಶ್‌ ಬದೋನಿ, ಸರಾಂಶ್ ಜೈನ್.

ಎರಡನೇ ಪಂದ್ಯಕ್ಕೆ ಭಾರತ ಎ ತಂಡ: ರಿಷಭ್ ಪಂತ್‌(ನಾಯಕ), ಕೆ.ಎಲ್‌. ರಾಹುಲ್, ಸಾಯಿ ಸುದರ್ಶನ್‌, ದೇವದತ್‌ ಪಡಿಕ್ಕಲ್‌, ಧ್ರುವ್‌ ಜುರೇಲ್‌(ವಿಕೆಟ್‌ ಕೀಪರ್‌), ಸಾಯಿ ಸುದರ್ಶನ್‌(ಉಪ ನಾಯಕ), ಋತುರಾಜ್‌ ಗಾಯಕ್ವಾಡ್‌, ಹರ್ಷ್‌ ದುಬೆ, ತನುಷ್‌ ಕೋಟ್ಯಾನ್‌, ಮಾನವ್‌ ಸುತಾರ್‌, ಗುರ್ನೂರ್ ಬ್ರಾರ್, ಅಭಿಮನ್ಯು ಈಶ್ವರನ್, ‌ ಖಲೀಲ್‌ ಅಹ್ಮದ್‌, ಮೊಹಮ್ಮದ್‌ ಸಿರಾಜ್‌, ಪ್ರಸಿದ್‌ ಕೃಷ್ಣ, ಆಕಾಶ್‌ ದೀಪ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.