ADVERTISEMENT

ಫುಟ್‌ಬಾಲ್‌: ಎಎಸ್‌ಎ ಅನಂತಪುರ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 19:41 IST
Last Updated 8 ಜನವರಿ 2020, 19:41 IST
ಎಎಸ್‌ಎ ಅನಂತಪುರ ಮತ್ತು ಬೆಂಗಳೂರು ಡ್ರೀಮ್ಸ್‌ ಯುನೈಟೆಡ್‌ ಎಫ್‌ಸಿ ನಡುವಿನ ಪಂದ್ಯದ ಹಣಾಹಣಿ ವೈಖರಿ
ಎಎಸ್‌ಎ ಅನಂತಪುರ ಮತ್ತು ಬೆಂಗಳೂರು ಡ್ರೀಮ್ಸ್‌ ಯುನೈಟೆಡ್‌ ಎಫ್‌ಸಿ ನಡುವಿನ ಪಂದ್ಯದ ಹಣಾಹಣಿ ವೈಖರಿ   

ಮಂಡ್ಯ: ಎಎಸ್‌ಎ ಅನಂತಪುರ ತಂಡವು ಇಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಕಪ್‌ ಅಖಿಲ ಭಾರತ ಫುಟ್‌ಬಾಲ್‌ ಟೂರ್ನಿಯಲ್ಲಿ ಗೆಲುವು ಸಾಧಿಸಿದೆ.

ಸರ್‌ ಎಂ.ವಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಎಎಸ್‌ಎ ತಂಡ 4–0 ಗೋಲುಗಳಿಂದ ಬೆಂಗಳೂರು ಡ್ರೀಮ್ಸ್‌ ಯುನೈಟೆಡ್‌ ಎಫ್‌ಸಿ ತಂಡವನ್ನು ಮಣಿಸಿತು.

ಎಎಸ್‌ಎ ತಂಡಕ್ಕೆ ನರೇಂದ್ರ (12, 91ನೇ ನಿ.), ಮಣಿಕಂಠ (43ನೇ ನಿ.), ಆನಂದ್‌ ರೆಡ್ಡಿ (66ನೇ ನಿ.) ಗೋಲುಗಳನ್ನು ತಂದಿತ್ತರು.

ADVERTISEMENT

ತಿರುವನಂತಪುರ ಕೆಎಸ್‌ಇಬಿ 1–0 ಗೋಲಿನಿಂದ ಕಿಕ್‌ಸ್ಟಾರ್ಟ್‌ ಎಫ್‌ಸಿ ಕರ್ನಾಟಕ ತಂಡವನ್ನು ಮಣಿಸಿತು. ವಿಜೇತ ತಂಡದ ಪರ ಸುದೀಶ್‌ 73ನೇ ನಿಮಿಷದಲ್ಲಿ ಗೋಲು ಗಳಿಸಿ ಜಯದ ರೂವಾರಿಯಾದರು.

ಕೆಎಸ್‌ಇಬಿ, ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡ ಸೆಮಿಫೈನಲ್‌ ಪ್ರವೇಶಿಸಿವೆ. ಸೆಮಿಫೈನಲ್‌ ಪಂದ್ಯಗಳು ಜ.10ರಂದು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.