ಬೆಂಗಳೂರು: ಕರ್ನಾಟಕ ತಂಡದವರು ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ಯೂತ್ ಗೇಮ್ಸ್ ಫುಟ್ಬಾಲ್ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ.
ಶನಿವಾರ ನಡೆದ ಪಂದ್ಯದಲ್ಲಿ ಕರ್ನಾಟಕ 3–1 ಗೋಲುಗಳಿಂದ ಒಡಿಶಾ ತಂಡವನ್ನು ಮಣಿಸಿತು.
ಇಶಾನ್ ರಘುನಂದನ್ (21ನೇ ನಿ.), ಎಸ್.ಪಿ.ಅಭಿಷೇಕ್ (57ನೇ ನಿ.) ಮತ್ತು ಆದಿತ್ಯ ಕೆ. (90ನೇ ನಿ.) ಅವರು ರಾಜ್ಯ ತಂಡದ ಪರ ಗೋಲು ಗಳಿಸಿದರು. ಒಡಿಶಾ ತಂಡದ ಏಕೈಕ ಗೋಲನ್ನು ವೊಂಗ್ಡೆನ್ ಲಾಮಾ ಅವರು 61ನೇ ನಿಮಿಷದಲ್ಲಿ ಗಳಿಸಿದರು.
ಸೋಮವಾರ ನಡೆಯಲಿರುವ ತನ್ನ ಮುಂದಿನ ಪಂದ್ಯದಲ್ಲಿ ಕರ್ನಾಟಕ ತಂಡ ಮೇಘಾಲಯದ ಸವಾಲು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.