ADVERTISEMENT

ಆ್ಯಂಟನಿಗೆ ರಾಷ್ಟ್ರಪತಿ ಪದಕ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 20:03 IST
Last Updated 15 ಆಗಸ್ಟ್ 2020, 20:03 IST
ಆ್ಯಂಟನಿ ಸೈಮನ್
ಆ್ಯಂಟನಿ ಸೈಮನ್   

ಬೆಂಗಳೂರು: ಮಾಜಿ ಫುಟ್‌ಬಾಲ್ ಆಟಗಾರ ಮತ್ತು ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆಯ ಅಧ್ಯಕ್ಷ ಆ್ಯಂಟನಿ ಸೈಮನ್ ಲೂಕಾಸ್ ನಾಗರಿಕ ರಕ್ಷಣೆ ವಿಭಾಗದಲ್ಲಿ ರಾಷ್ಟ್ರಪತಿಗಳ ಪದಕ ಗಳಿಸಿದ್ದಾರೆ ಎಂದು ಬಿಡಿಎಫ್‌ಎ ಪ್ರಕಟಣೆ ತಿಳಿಸಿದೆ.

ಬೆಂಗಳೂರಿನಲ್ಲಿ ಒಟ್ಟು 52 ನಾಗರಿಕ ರಕ್ಷಣಾ ಘಟಕಗಳಿದ್ದು ಆ್ಯಂಟನಿ ಅವರು 43ನೇ ಸಂಖ್ಯೆಯ ಬಾಣಸವಾಡಿ ಘಟಕದ ಕಾರ್ಯಕರ್ತ. ರಕ್ಷಣೆ, ಸಂವಹನ, ಅಗ್ನಿಶಮನ ಮತ್ತು ಇತರ ವಿಕೋಪ ನಿರ್ವಹಣೆಯಲ್ಲಿ ಅವರು ಪಾಲ್ಗೊಂಡಿದ್ದು ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೂ ಪಾತ್ರರಾಗಿದ್ದರು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT