ಬೆಂಗಳೂರು: ದರ್ಶನ್ ಡಿ.ಎಸ್. ಗಳಿಸಿದ ನಾಲ್ಕು ಗೋಲುಗಳ ಬಲದಿಂದ ಕರ್ನಾಟಕ ಅರಣ್ಯ ಇಲಾಖೆ ತಂಡವು ಕೆಎಸ್ಎಚ್ಎ ಎ ಡಿವಿಷನ್ ಹಾಕಿ ಟೂರ್ನಿಯಲ್ಲಿ ಭರ್ಜರಿ ಜಯ ಗಳಿಸಿತು.
ಶನಿವಾರ ನಡೆದ ಪಂದ್ಯದಲ್ಲಿ ಅರಣ್ಯ ಇಲಾಖೆ 7–2ರಿಂದ ಎಚ್ಎಂಟಿ ತಂಡವನ್ನು ಪರಾಭವಗೊಳಿಸಿತು. ದರ್ಶನ್ 16, 29, 42 ಮತ್ತು 52ನೇ ನಿಮಿಷಗಳಲ್ಲಿ ಕೈಚಳಕ ತೋರಿದರು. ವಿಜೇತ ತಂಡಕ್ಕಾಗಿ ಮಿಥುನ್ ಬಿಜವಾಡ (12ನೇ ನಿ.), ನಾಗರಾಜ (46ನೇ ನಿ.), ನವೀನ್ ಕೆ.ಎ. (54ನೇ ನಿ.) ಗೋಲು ದಾಖಲಿಸಿದರು. ಎಚ್ಎಂಟಿ ಪರ ಕಾರ್ತಿಕ್ (14ನೇ ನಿ.) ಮತ್ತು ಮೊಸಿನ್ (48ನೇ ನಿ.) ಗೋಲು ಹೊಡೆದರು. ಮತ್ತೊಂದು ಪಂದ್ಯದಲ್ಲಿ ಯಂಗ್ಸ್ಟಾರ್ ಹಾಕಿ ಕ್ಲಬ್, ರಾಯಚೂರು 4–2ರಿಂದ ಗುರು ಕ್ಲಬ್ ತಂಡಕ್ಕೆ ಸೋಲುಣಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.