ADVERTISEMENT

ಕೆ1000 ರ‍್ಯಾಲಿ: ವಾಡಿಯಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2023, 23:30 IST
Last Updated 23 ಡಿಸೆಂಬರ್ 2023, 23:30 IST
ತುಮಕೂರು ಸಮೀಪದ ಗುಬ್ಬಿಯಲ್ಲಿ ನಡೆದ ಐಎನ್‌ಆರ್‌ಸಿ2  ಕೆ 1000 ರ‍್ಯಾಲಿಯಲ್ಲಿ ಸಮಗ್ರ ಪ್ರಶಸ್ತಿ ಗೆದ್ದ ಹರಿಕೃಷ್ಣ ವಾಡಿಯಾ ಮತ್ತು ಕುನಾಲ್ ಕಶ್ಯಪ್  
ತುಮಕೂರು ಸಮೀಪದ ಗುಬ್ಬಿಯಲ್ಲಿ ನಡೆದ ಐಎನ್‌ಆರ್‌ಸಿ2  ಕೆ 1000 ರ‍್ಯಾಲಿಯಲ್ಲಿ ಸಮಗ್ರ ಪ್ರಶಸ್ತಿ ಗೆದ್ದ ಹರಿಕೃಷ್ಣ ವಾಡಿಯಾ ಮತ್ತು ಕುನಾಲ್ ಕಶ್ಯಪ್      

ತುಮಕೂರು: ಆರ್ಕಾ ಮೋಟರ್‌ಸ್ಪೋರ್ಟ್ಸ್‌ನ  ಹರಿಕೃಷ್ಣ ವಾಡಿಯಾ ಮತ್ತು ಅವರ ಸಹಚಾಲಕ ಕುನಾಲ್ ಕಶ್ಯಪ್ ಅವರು ಬ್ಲ್ಯೂ ಬ್ಯಾಂಡ್ ಕೆ 1000 ರ‍್ಯಾಲಿ ಪ್ರಶಸ್ತಿ ಜಯಿಸಿದರು.

ಶನಿವಾರ ಗುಬ್ಬಿ ಸಮೀಪ ನಡೆದ ರ‍್ಯಾಲಿಯಲ್ಲಿ ವಾಡಿಯಾ ಮುನ್ನಡೆ ಸಾಧಿಸಿದರು. ಇದರೊಂದಿಗೆ ಅವರು ಐಎನ್‌ಆರ್‌ಎಸ್ 2 ಪ್ರಶಸ್ತಿ ಮತ್ತು 40 ಅಂಕಗಳನ್ನು ತಮ್ಮದಾಗಿಸಿಕೊಂಡರು. 1 ಗಂಟೆ, 26 ನಿಮಿಷ, 53.5 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಸಮಗ್ರ ಪ್ರಶಸ್ತಿ ಗೆದ್ದರು.

ಪಿವಿಟಿಯ  ಡೀನ್ ಮಸ್ಕರೇನಸ್ ಮತ್ತು ಗಗನ್ ಕರುಂಬಯ್ಯ ಅವರು ಎರಡನೇ ಸ್ಥಾನ ಗಳಿಸಿದರು. ಸ್ನ್ಯಾಪ್‌ ರೇಸಿಂಗ್‌ನ ಯೂನುಸ್ ಇಲಿಯಾಸ್ ಮತ್ತು ನಿತಿನ್ ಜೇಕಬ್ ಮೂರನೇ ಸ್ಥಾನ ಗಳಿಸಿದರು.

ADVERTISEMENT

ಐಎನ್‌ಆರ್‌ಸಿ 2 ವಿಭಾಗದಲ್ಲಿ ವಾಡಿಯಾ–ಕುನಾಲ್ ಮೊದಲಿಗರಾದರು. ಜೆಒ ಒನ್ ರ‍್ಯಾಲಿಂಗ್‌ನ ಚೇತನ್ ಶಿವರಾಂ ಮತ್ತು ಇ ಶಿವಪ್ರಕಾಶ್ ಎರಡನೇ ಹಾಗೂ ಪಿವಿಟಿಯ ರಿತೇಶ್ ಗುತ್ತೇದಾರ್ ಮತ್ತು ಎಂ.ಸೂರಜ್ ಮೂರನೇ ಸ್ಥಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.