ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಕರ್ನಾಟಕ ಜೂನಿಯರ್ ಆರ್ಚರಿ ತಂಡದ ಆಯ್ಕೆ ಟ್ರಯಲ್ಸ್ ಇದೇ 29ರಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪಶ್ವಿಮ ಬಂಗಾಳದ ಬೊಲಾಪುರದಲ್ಲಿ ಮುಂದಿನ ವರ್ಷ ಫೆಬ್ರುವರಿಯಲ್ಲಿ ನಡೆಯಲಿರುವ ಎನ್ಟಿಪಿಸಿ ಜೂನಿಯರ್ ರಾಷ್ಟ್ರೀಯ ಆರ್ಚರಿ ಚಾಂಪಿಯನ್ಷಿಪ್ ಭಾಗವಹಿಸುವ ಕರ್ನಾಟಕ ತಂಡಗಳನ್ನು ಇಲ್ಲಿ ಆಯ್ಕೆ ಮಾಡಲಾಗುವುದು. 2004ರ ಜನವರಿ 1ರ ನಂತರ ಜನಿಸಿದವರು ಟ್ರಯಲ್ಸ್ನಲ್ಲಿ ಹಾಜರಾಗಬೇಕು. ವಿವರಗಳಿಗೆ ಕರ್ನಾಟಕ ಅಮೇಚೂರ್ ಆರ್ಚರಿ ಸಂಸ್ಥೆ ಕಾರ್ಯದರ್ಶಿ ಟಿ. ಅನಂತರಾಜು (080–22275656) ಅವರನ್ನು ಸಂಪರ್ಕಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.