ಹುಬ್ಬಳ್ಳಿ: ಕರ್ನಾಟಕದ ವೆಂಕಪ್ಪ ಕೆಂಗಲಗುತ್ತಿ ಹಾಗೂ ದಾನಮ್ಮ ಚಿಚಖಂಡಿ ಅವರು ಜೈಪುರದಲ್ಲಿ ನಡೆಯುತ್ತಿರುವ 71ನೇ ರಾಷ್ಟ್ರೀಯ ಸೀನಿಯರ್ ಹಾಗೂ ಜೂನಿಯರ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ಷಿಪ್ನಲ್ಲಿ ಶುಕ್ರವಾರ ಕಂಚಿನ ಪದಕ ಗೆದ್ದರು.
ಪುರುಷರ ನಾಲ್ಕು ಕಿ.ಮೀ. ವೈಯಕ್ತಿಕ ಪರ್ಸ್ಯೂಟ್ನಲ್ಲಿ ಬಾಗಲಕೋಟೆ ತಾಲ್ಲೂಕು ತುಳಸಿಗೇರಿಯ ವೆಂಕಪ್ಪ ಐದು ನಿಮಿಷ 00.09 ಸೆಕೆಂಡ್ಗಳಲ್ಲಿ ಗುರಿ ತಲುಪಿದರು.
18 ವರ್ಷದೊಳಗಿನ ಬಾಲಕಿಯರ 10 ಕಿ.ಮೀ. ಪಾಯಿಂಟ್ ರೇಸ್ನಲ್ಲಿ ಜಮಖಂಡಿ ತಾಲ್ಲೂಕು ನಾವಲಗಿ ಗ್ರಾಮದ ದಾನಮ್ಮ 11 ಪಾಯಿಂಟ್ ಕಲೆಹಾಕಿ ಪದಕ ಗೆದ್ದರು. ಇದೇ ಸ್ಪರ್ಧೆಯಲ್ಲಿ ಬೆಂಗಳೂರಿನ ಸೈಕ್ಲಿಸ್ಟ್ ಕೀರ್ತಿ ರಂಗಸ್ವಾಮಿ ಒಂಬತ್ತು ಪಾಯಿಂಟ್ ಗಳಿಸಿ ನಾಲ್ಕನೇ ಸ್ಥಾನಕ್ಕೆ ಸಮಾಧಾನ ಪಟ್ಟುಕೊಂಡರು. ಮೂರನೇ ದಿನದ ಅಂತ್ಯಕ್ಕೆ ಕರ್ನಾಟಕದ ಸೈಕ್ಲಿಸ್ಟ್ಗಳು ಒಟ್ಟು 13 ಪದಕಗಳನ್ನು ಜಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.