ಬೆಂಗಳೂರು: ಜಿ.ಎನ್. ಬಸವರಾಜ್ ಅವರು ಗವರ್ನರ್ಸ್ ಕಪ್ ಗಾಲ್ಫ್ ಟೂರ್ನಿಯ ಮುಕ್ತ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ರನ್ನರ್ ಅಪ್ ಸ್ಥಾನವನ್ನು ವೃಶಾಂಕ್ ಬಾಲು ಪಡೆದುಕೊಂಡರು. ಬೆಂಗಳೂರು ಗಾಲ್ಫ್ ಕ್ಲಬ್ನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ವಿವಿಧ ವಿಭಾಗದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು.
ಹ್ಯಾಂಡಿಕ್ಯಾಪ್ 0–9 ವಿಭಾಗದಲ್ಲಿ ಸಿ. ಸುಂದರ್ ಪ್ರಥಮ ಸ್ಥಾನ ಗಳಿಸಿದರೆ, ಧ್ರುವ ಜೌಹಾರಿ ದ್ವಿತೀಯ ಸ್ಥಾನ ಪಡೆದರು. ಹ್ಯಾಂಡಿಕ್ಯಾಪ್ 10–18 ವಿಭಾಗದ ಮೊದಲ ಸ್ಥಾನ ನೀರಜ್ ಮಿತ್ತಲ್ ಅವರಿಗೆ ಒಲಿಯಿತು. ಸುನಿಲ್ ವಸಂತ್ ದ್ವಿತೀಯ ಎರಡನೇ ಸ್ಥಾನ ಪಡೆದರು. ಹ್ಯಾಂಡಿಕ್ಯಾಪ್ 19–24 ವಿಭಾಗದಲ್ಲಿ ಲೋಕೇಶ್ ಕೃಷ್ಣ ಹಾಗೂ ಕಿಶೋರ್ ರೆಡ್ಡಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದರು.
ಮಹಿಳೆಯರ ಗ್ರಾಸ್ ವಿಭಾಗದಲ್ಲಿ ಅನುಷ್ಕಾ ಬೊರ್ಕರ್ , ನೆಟ್ ವಿಭಾಗದಲ್ಲಿ ಧನಲಕ್ಷ್ಮೀ ಪ್ರಶಸ್ತಿ ಗೆದ್ದರು..
ರಾಜ್ಯಪಾಲ ವಜೂಭಾಯಿ ವಾಲಾ ಪ್ರಶಸ್ತಿ ವಿತರಿಸಿ ಮಾತನಾಡಿದರು. ಟೂರ್ನಿಯ ನಿರ್ದೇಶಕ ರವಿಕುಮಾರ್ ರಾಜು, ಕಾರ್ಯದರ್ಶಿ ಸಂಜಯ್ ಪೋಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.