ಬೆಂಗಳೂರು: ಮಾಹಿರ್ ರಾಕ್ರಾ ಅವರು ಬೆಂಗಳೂರು ಗಾಲ್ಫ್ ಕ್ಲಬ್ನಲ್ಲಿ ನಡೆದ ಕರ್ನಾಟಕ ಓಪನ್ ಅಮೆಚೂರ್ ಗಾಲ್ಫ್ ಚಾಂಪಿಯನ್ಷಿಪ್ನ ಮುಕ್ತ (ಗ್ರಾಸ್) ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಆ್ಯರನ್ ಮೆಂಡೋನ್ಸಾ ರನ್ನರ್ ಅಪ್ ಆದರು.
ಹ್ಯಾಂಡಿಕ್ಯಾಪ್ 0–9 ವಿಭಾಗದಲ್ಲಿ ಸುಂದರಂ ಸಿ., 10–18 ವಿಭಾಗದಲ್ಲಿ ಸುಮಂತ್ ಎನ್.ವೈ. ಹಾಗೂ 19–24 ವಿಭಾಗದಲ್ಲಿ ಸಿದ್ದಲಿಂಗ ಸ್ವಾಮಿ ಎಸ್. ಪ್ರಶಸ್ತಿ ತಮ್ಮದಾಗಿಸಿಕೊಂಡರು.
ರಿಯಾಂಕಾ ತಿಮ್ಮಯ್ಯ ಮಹಿಳೆಯರ ಗ್ರಾಸ್ ಸ್ಪರ್ಧೆಯಲ್ಲಿ ವಿಜೇತರಾದರೆ, ನೆಟ್ ವಿಭಾಗದಲ್ಲಿ ಸುನೀತಾ ಪ್ರಶಸ್ತಿಗೆ ಮುತ್ತಿಕ್ಕಿದರು. 65+ ಸೀನಿಯರ್ಸ್ ವಿಭಾಗದ ಗ್ರಾಸ್ ಸ್ಪರ್ಧೆಯಲ್ಲಿ ವಿ.ಟಿ. ರಂಗನಾಥ್ ಹಾಗೂ ನೆಟ್ ವಿಭಾಗದಲ್ಲಿ ಡಾ. ರಾಮೇಗೌಡ ಚಾಂಪಿಯನ್ ಆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.