ADVERTISEMENT

ತಂಡಕ್ಕೆ ಮರಳುವ ಭರವಸೆಯೇ ಇರಲಿಲ್ಲ: ಚಿಂಗ್ಲೆನ್ಸಾನ

ಪಿಟಿಐ
Published 15 ಜನವರಿ 2020, 20:33 IST
Last Updated 15 ಜನವರಿ 2020, 20:33 IST
ಚಿಂಗ್ಲೆನ್ಸಾನ ಸಿಂಗ್ ಕಂಗುಜಂ -ಎಎಫ್‌ಪಿ ಚಿತ್ರ
ಚಿಂಗ್ಲೆನ್ಸಾನ ಸಿಂಗ್ ಕಂಗುಜಂ -ಎಎಫ್‌ಪಿ ಚಿತ್ರ   

ಭುವನೇಶ್ವರ : ’ಹಿಮ್ಮಡಿ ನೋವಿನಿಂದ ಬಳಲಿ ಕಂಗಾಲಾಗಿದ್ದಾಗ ತಂಡಕ್ಕೆ ಮರಳುವ ಭರವಸೆಯನ್ನೇ ಕಳೆದುಕೊಂಡಿದ್ದೆ. ಆದರೆ ಈಗ ಖುಷಿಯಾಗಿದೆ’ ಎಂದು ಭಾರತ ಹಾಕಿ ತಂಡದ ಆಟಗಾರ ಚಿಂಗ್ಲೆನ್ಸಾನ ಸಿಂಗ್ ಕಂಗುಜಂ ಅಭಿಪ್ರಾಯಪಟ್ಟರು.

ಮಣಿಪುರದ ಈ ಮಿಡ್‌ಫೀಲ್ಡರ್ ಕಳೆದ ವರ್ಷ ನಡೆದಿದ್ದ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ ವೇಳೆ ಗಾಯಗೊಂಡಿದ್ದರು. ಟೂರ್ನಿಯಲ್ಲಿ ಅವರು ಪ್ರತಿನಿಧಿಸಿದ್ದ ತಂಡ ಪ್ರಶಸ್ತಿ ಗೆದ್ದುಕೊಂಡಿತ್ತು.

‘ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ದಿನಗಳು ಅತ್ಯಂತ ಕಠಿಣವಾಗಿದ್ದವು. ಆ ಸಂದರ್ಭದಲ್ಲಿ ದೇಹದ ಕೆಳಭಾಗಕ್ಕೆ ಹೆಚ್ಚು ಕೆಲಸ ಕೊಡಲು ಸಾಧ್ಯವಾಗದ ಕಾರಣ ತೂಕ ಐದರಿಂದ ಆರು ಕೆಜಿ ಹೆಚ್ಚಾಗಿತ್ತು’ ಎಂದು ಅವರು ಹೇಳಿದರು.

ADVERTISEMENT

2018ರ ಎಫ್‌ಐಎಚ್‌ ವಿಶ್ವಕಪ್‌ ಟೂರ್ನಿಯಲ್ಲಿ ಅವರು ಕೊನೆಯದಾಗಿ ಭಾರತದ ಜೆರ್ಸಿ ತೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.