ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ಸಂಸ್ಥೆ (ಕೆಟಿಟಿಎ) ಗೌರವಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಕಾರ್ಯಾಧ್ಯಕ್ಷರಾಗಿ ಎಚ್.ಡಿ. ರಮೇಶ್ ಶಾಸ್ತ್ರಿ ಮತ್ತು ಕಾರ್ಯದರ್ಶಿಯಾಗಿ ಟಿ.ಜಿ. ಉಪಾಧ್ಯೆ ಆಯ್ಕೆಯಾಗಿದ್ದಾರೆ. ಈಚೆಗೆ ನಡೆದ ಸಂಸ್ಥೆಯ ಸರ್ವಸದಸ್ಯರ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಮಿತಿ: ಪ್ರಹ್ಲಾದ ಜೋಶಿ (ಗೌರವ ಅಧ್ಯಕ್ಷ), ಡಾ. ಪಿ. ದಯಾನಂದ ಪೈ, ದಿನೇಶ್ ಗುಂಡೂರಾವ್ (ಮುಖ್ಯ ಪೋಷಕರು), ನಾರಾಯಣ ಸಭಾಹಿತ್ (ಪೋಷಕರು), ಎಚ್.ಡಿ. ರಮೇಶ್ ಶಾಸ್ತ್ರಿ (ಕಾರ್ಯಾಧ್ಯಕ್ಷ), ಆರ್. ನಂದನ್, ಆರ್. ರೋಹಿತ್, ಸಂಗಮ್ ಬೇಲೂರ್, ವಿಜಯ ಪೈ, ವಾದಿರಾಜ್ ಕಟ್ಟಿ (ಉಪಾಧ್ಯಕ್ಷರು), ಟಿ.ಜಿ. ಉಪಾಧ್ಯೆ (ಕಾರ್ಯದರ್ಶಿ), ಕೆ. ಆರ್. ಮಂಜುನಾಥ(ಖಜಾಂಚಿ), ಸಿ. ಗುಣಾಲನ್, ಜಿ. ಮನೋಹರನ್, ರವಿಕುಮಾರ್ ನಾಯ್ಕ (ಜಂಟಿ ಕಾರ್ಯದರ್ಶಿಗಳು), ಬೆಂಗಳೂರು ನಗರ ಜಿಲ್ಲಾ ಟಿಟಿ ಸಂಸ್ಥೆ, ಬೆಳಗಾವಿ ಜಿಲ್ಲಾ ಟಿಟಿ ಸಂಸ್ಥೆ, ಮೈಸೂರು ಜಿಲ್ಲಾ ಟಿಟಿ ಸಂಸ್ಥೆ, ಧಾರವಾಡ ಜಿಲ್ಲಾ ಟಿಟಿ ಸಂಸ್ಥೆ, ಬಳ್ಳಾರಿ ಜಿಲ್ಲಾ ಟಿಟಿ ಸಂಸ್ಥೆ (ಆಡಳಿತ ಸಮಿತಿ ಸದಸ್ಯರು).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.