ADVERTISEMENT

ಕೆಎಸ್‌ಪಿಗೆ ಭರ್ಜರಿ ಜಯ

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 19:45 IST
Last Updated 30 ಜುಲೈ 2021, 19:45 IST

ಬೆಂಗಳೂರು: ಮನೋಜ್‌ (19 ಪಾಯಿಂಟ್ಸ್) ಹಾಗೂ ಸುಭಾಷ್‌ (17 ಪಾಯಿಂಟ್ಸ್) ಅವರ ಅಮೋಘ ಆಟವು ಕೆಎಸ್‌ಪಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿತು. ಎಂ.ಸಿ.ಶ್ರೀನಿವಾಸ್ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ‘ಬಿ’ ಡಿವಿಷನ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ತಂಡವು 95–48ರಿಂದ ಬಾಶ್ ತಂಡವನ್ನು ಮಣಿಸಿತು.

ಬಾಶ್ ತಂಡದ ಪರ ವಿಜಯ್‌ (24 ಪಾಯಿಂಟ್ಸ್) ಮಿಂಚಿದರು.

ಕೋರಮಂಗಲ ಎಸ್‌ಸಿ ತಂಡವು 87–31ರಿಂದ ರೋವರ್ಸ್‌ ಧಾರವಾಡ ತಂಡವನ್ನು ಸೋಲಿಸಿತು. ವಿಜೇತ ತಂಡದ ಪರ ರವೀಶ್ ಮತ್ತು ಕರಣ್ ತಲಾ 14 ಪಾಯಿಂಟ್ಸ್ ಕಲೆಹಾಕಿದರು.

ADVERTISEMENT

ಇನ್ನೊಂದು ಪಂದ್ಯದಲ್ಲಿ ಎಂ.ಎನ್‌.ಕೆ. ರಾವ್‌ ಪಾರ್ಕ್‌ ಬಿಸಿ ತಂಡವು 70–53ರಿಂದ ಕನಕ ಕೋಲಾರ ಎದುರು ಜಯ ಸಾಧಿಸಿತು. ವಿಜೇತ ತಂಡದ ಪ್ರಜ್ಞೇಶ್‌ 23 ಮತ್ತು ಪ್ರಶಾಂತ್ 10 ಪಾಯಿಂಟ್ಸ್ ಕಲೆಹಾಕಿದರು. ಮತ್ತೊಂದು ಪಂದ್ಯದಲ್ಲಿ ಎಂಇಜಿ 77–37ರಿಂದ ಪ್ರೊಟೆಕ್‌ ಅಸೋಸಿಯೇಷನ್ ಮೈಸೂರು ತಂಡ ವನ್ನು ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.