ADVERTISEMENT

ವೀಲ್‌ಚೇರ್ ಟೆನಿಸ್‌: ಎಂಟರ ಘಟ್ಟಕ್ಕೆ ಮಧುಸೂದನ್‌

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 13:37 IST
Last Updated 3 ಮಾರ್ಚ್ 2021, 13:37 IST
ಶೇಖರ್ ವೀರಸ್ವಾಮಿ (ಎಡ)–ಸಂಗ್ರಹ ಚಿತ್ರ
ಶೇಖರ್ ವೀರಸ್ವಾಮಿ (ಎಡ)–ಸಂಗ್ರಹ ಚಿತ್ರ   

ಬೆಂಗಳೂರು: ಉತ್ತಮ ಸಾಮರ್ಥ್ಯ ತೋರಿದ ಕರ್ನಾಟಕದ ಎಚ್‌. ಮಧುಸೂದನ್ ಹಾಗೂ ಶಿವ ಪ್ರಸಾದ್ ಅವರು ಇಲ್ಲಿ ನಡೆಯುತ್ತಿರುವ ಕೆಎಸ್‌ಎಲ್‌ಟಿಎ–ಎಐಟಿಎ ವೀಲ್‌ಚೇರ್ ಟೆನಿಸ್ ಟೂರ್ನಿಯ ಎಂಟರ ಘಟ್ಟಕ್ಕೆ ಲಗ್ಗೆಯಿಟ್ಟರು.

ಪುರುಷರ ಸಿಂಗಲ್ಸ್ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಬುಧವಾರ ಮಧುಸೂದನ್ 9–2ರಿಂದ ಐದನೇ ಶ್ರೇಯಾಂಕದ ಕಣ್ಣುಪಾಯನ್ ಸತ್ಯಶಿವಂ ಎದುರು ಗೆದ್ದರೆ, ಇಷ್ಟೇ ಅಂತರದಿಂದ ಶಿವಪ್ರಸಾದ್ ಅವರು ತಮಿಳುನಾಡಿನವರೇ ಆದ ಅಲೆಕ್ಸಾಂಡರ್‌ ಜೇಮ್ಸ್ ಅವರನ್ನು ಸೋಲಿಸಿದರು.

ಮಧುಸೂದನ್ ಅವರು ಮುಂದಿನ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಆಟಗಾರ ತಮಿಳುನಾಡಿನ ಸುಬ್ರಮಣಿಯನ್ ಬಾಲಚಂದ್ರ ಎದುರು ಆಡಲಿದ್ದಾರೆ. ಶಿವ ಪ್ರಸಾದ್ ಅವರೂ ತಮಿಳುನಾಡಿದ ಕರುಣಾಕರನ್ ಕಾರ್ತಿಕ್‌ ಅವರನ್ನು ಎದುರಿಸಲಿದ್ದಾರೆ.

ADVERTISEMENT

ಅಗ್ರಶ್ರೇಯಾಂಕದ ಆಟಗಾರ ತಮಿಳುನಾಡಿನ ದುರೈ ಮರಿಯಪ್ಪನ್‌ ಹಾಗೂ ಎರಡನೇ ಶ್ರೇಯಾಂಕದ, ಕರ್ನಾಟಕದ ವೀರಸ್ವಾಮಿ ಶೇಖರ್ ಕೂಡ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು. ಇವರಿಬ್ಬರೂ ಕ್ರಮವಾಗಿ ಕರ್ನಾಟಕದ ಎಂ.ಗೇಬ್ರಿಯಲ್ ಹಾಗೂ ಪಾಂಡುರಂಗಸ್ವಾಮಿ ಅವರನ್ನು 9–1 ಅಂತರದಿಂದ ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.