ADVERTISEMENT

ಟಿಟಿ: ಅಥರ್ವ, ತನಿಷ್ಕಾ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 16:21 IST
Last Updated 9 ನವೆಂಬರ್ 2023, 16:21 IST
ಟ್ರೋಫಿಯೊಂದಿಗೆ ತನಿಷ್ಕಾ ಕಪಿಲ್ ಕಾಲಭೈರವ ಮತ್ತು ಅಥರ್ವ ನವರಂಗ
ಟ್ರೋಫಿಯೊಂದಿಗೆ ತನಿಷ್ಕಾ ಕಪಿಲ್ ಕಾಲಭೈರವ ಮತ್ತು ಅಥರ್ವ ನವರಂಗ   

ಬೆಂಗಳೂರು: ಅಥರ್ವ ನವರಂಗ ಮತ್ತು ತನಿಷ್ಕಾ ಕಪಿಲ್ ಕಾಲಭೈರವ ಅವರು ಮಲ್ಲೇಶ್ವರಂ ಅಸೋಸಿಯೇಷನ್‌ನಲ್ಲಿ ನಡೆಯುತ್ತಿರುವ 25ನೇ ವರ್ಷದ ಎಂ.ಎಸ್‌.ರಾಮಯ್ಯ ಸ್ಮಾರಕ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 15 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ವಿಭಾಗದ ಸಿಂಗಲ್ಸ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು.

ಗುರುವಾರ ನಡೆದ ಫೈನಲ್‌ನಲ್ಲಿ ಅಥರ್ವ 11-3, 11-9, 11-5ರಿಂದ ಸಿದ್ಧಾಂತ್‌ ಧಾರಿವಾಲ್ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಅಥರ್ವ 11-7, 11-6, 6-11, 11-9ರಿಂದ ತೆಶುಬ್ ದಿನೇಶ್ ವಿರುದ್ಧ; ಸಿದ್ಧಾಂತ್‌ 11-8, 13-11, 11-9ರಿಂದ ವೇದಾಂತ್ ವಶಿಷ್ಠ ವಿರುದ್ಧ ಜಯ ಸಾಧಿಸಿದ್ದರು.

ಬಾಲಕಿಯರ ಫೈನಲ್‌ನಲ್ಲಿ ತನಿಷ್ಕಾ 11-9, 6-11, 11-6 , 5-11 , 11-7ರಿಂದ ಆಯುಷಿ ಬಿ. ಗೋಡ್ಸೆ ಅವರನ್ನು ಸೋಲಿಸಿದರು. ಸೆಮಿಫೈನಲ್‌ನಲ್ಲಿ ತನಿಷ್ಠಾ 11-8, 10-12, 15-13, 11-9ರಿಂದ ಹಿಯಾ ಸಿಂಗ್‌ ವಿರುದ್ಧ; ಆಯುಷಿ 11-7, 11-5, 9-11, 8-11, 11-9ರಿಂದ ಹಿಮಾಂಶಿ ಚೌಧರಿ ವಿರುದ್ಧ ಗೆಲುವು ಪಡೆದಿದ್ದರು.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.