ಮುಂಬೈ: ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ನಿರೀಕ್ಷೆ ಇರುವ ಕ್ರೀಡಾಪಟುಗಳ ನೆರವಿಗಾಗಿ ‘ಒಂದು ಕನಸು, ಒಂದೇ ಲಕ್ಷ್ಯ’ ಯೋಜನೆಗೆ ಶುಕ್ರವಾರ ಚಾಲನೆ ನೀಡಲಾಯಿತು.
ಐದು ಕ್ರೀಡೆಗಳಲ್ಲಿ ಹೆಸರು ಮಾಡಿರುವ ಏಳು ಮಂದಿ ಯುವ ಅಥ್ಲೀಟ್ಗಳಿಗೆ ಇದರಡಿ ವಿಶೇಷ ತರಬೇತಿ ಸಿಗಲಿದೆ. ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ್ ವಿಜೇತ ಲಕ್ಷ್ಯ ಸಂಸ್ಥೆಯ ಈ ಯೋಜನೆಗೆ ಡ್ರೀಮ್ ಸ್ಪೋರ್ಟ್ಸ್ ಫೌಂಡೇಷನ್ (ಡಿಎಸ್ಎಫ್) ಕೈಜೋಡಿಸಿದೆ.
ಮಹಾರಾಷ್ಟ್ರ ಲಾನ್ ಟೆನಿಸ್ ಸಂಸ್ಥೆಯ ಕಾರ್ಯದರ್ಶಿ ಸುಂದರ್ ಅಯ್ಯರ್ ಮತ್ತು ಡ್ರೀಮ್ ಸ್ಪೋರ್ಟ್ಸ್ನ ಮುಖ್ಯ ಯೋಜನಾ ಅಧಿಕಾರಿ ಕಿರಣ್ ವಿವೇಕಾನಂದ ಅವರ ಸಮಕ್ಷಮದಲ್ಲಿ ಉದ್ಘಾಟನೆಗೊಂಡಿತು. ಶೂಟಿಂಗ್, ಬಾಕ್ಸಿಂಗ್, ಕುಸ್ತಿ, ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್ನಲ್ಲಿ 2024ರ ಪ್ಯಾರಿಸ್ ಒಲಿಂಪಿಕ್ಸ್ ಮತ್ತು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಪದಕಗಳನ್ನು ಗೆಲ್ಲುವ ಗುರಿ ಹೊಂದಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.