ಬೆಂಗಳೂರು: ಜಿದ್ದಾಜಿದ್ದಿನ ಹೋರಾಟದಲ್ಲಿ ಬಲಿಷ್ಠ ಎದುರಾಳಿಯ ಸವಾಲು ಮೀರಿ ನಿಂತ ಎಚ್.ಪಿ.ಅನನ್ಯಾ ಅವರು ಎಂ.ಎಸ್.ರಾಮಯ್ಯ ಸ್ಮಾರಕ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.
ಗುರುವಾರ ನಡೆದ ಯೂತ್ ಬಾಲಕಿಯರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಅನನ್ಯಾ 11–6, 8–11, 11–8, 11–6, 6–11, 3–11, 12–10ರಲ್ಲಿ ದೇಸ್ನಾ ಎಂ.ವಂಶಿಕಾ ಅವರನ್ನು ಪರಾಭವಗೊಳಿಸಿದರು.
ಸೆಮಿಫೈನಲ್ ಪಂದ್ಯಗಳಲ್ಲಿ ದೇಸ್ನಾ 11–8, 13–11, 11–7, 8–11, 11–8ರಲ್ಲಿ ಸುಶ್ಮಿತಾ ಆರ್.ಬಿದರಿ ಎದುರೂ, ಅನನ್ಯಾ 11–9, 9–11, 14–12, 12–10, 11–6ರಲ್ಲಿ ಕಾವ್ಯಾ ಮೇಲೂ ಗೆದ್ದಿದ್ದರು.
ಇದಕ್ಕೂ ಮೊದಲು ನಡೆದಿದ್ದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಸುಶ್ಮಿತಾ 11–8, 11–9, 11–3, 11–8ರಲ್ಲಿ ವಿ.ಸ್ಮೃತಿ ಎದುರೂ, ದೇಸ್ನಾ 6–11, 11–6, 9–11, 11–9, 9–11, 11–6, 11–9ರಲ್ಲಿ ಪಿ.ಎಂ.ಶ್ವೇತಾ ಮೇಲೂ, ಎಚ್.ಪಿ.ಅನನ್ಯಾ 13–11, 5–11, 6–11, 11–6, 2–11, 11–9, 11–5ರಲ್ಲಿ ಜಾಹ್ನವಿ ವಿಜಯಕುಮಾರ್ ಎದುರೂ, ಎಸ್.ಕಾವ್ಯಾ 8–11, 11–8, 11–8, 9–11, 11–7, 6–11, 11–6ರಲ್ಲಿ ಪ್ರೇಕ್ಷಾ ಪಿ.ಕರ್ಕೇರಾ ವಿರುದ್ಧವೂ ವಿಜಯಿಯಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.