ಮೈಸೂರು: ನಿವಾನ್ ರಾಘವೇಂದ್ರ ಸೇರಿದಂತೆ ನಾಲ್ವರು ಆಟಗಾರರು ಇಲ್ಲಿ ನಡೆದಿರುವ ‘ರೋಟರಿ ಬೃಂದಾವನ 16 ವರ್ಷದೊಳಗಿನವರ ಮುಕ್ತ ರೇಟಿಂಗ್ ಚೆಸ್ ಟೂರ್ನಿ’ಯಲ್ಲಿ ನಾಲ್ಕನೇ ಸುತ್ತಿನ ಅಂತ್ಯಕ್ಕೆ ಅಗ್ರಸ್ಥಾನದಲ್ಲಿ ಮುನ್ನಡೆದಿದ್ದಾರೆ.
ನಿವಾನ್, ಸಾತ್ವಿಕ್ ವಿಶ್ವನಾಥ್, ಆರುಷ್ ಭಟ್ ಹಾಗೂ ಯು.ಡಿ. ಆಕಾಂಕ್ಷ್ ಅಜೇಯ ಗೆಲುವಿನೊಂದಿಗೆ 4 ಅಂಕ ಸಂಪಾದಿಸಿದರು. ನಾಲ್ಕನೇ ಸುತ್ತಿನ ಹಣಾಹಣಿಯಲ್ಲಿ ನಿವಾನ್ ಬಿ.ಪಿ. ಉತ್ಸವ್ರನ್ನು ಮಣಿಸಿದರು. ಆರುಷ್ ಅವರು ಪ್ರಣವ್ ಶೇಟ್ ವಿರುದ್ಧ, ಆಕಾಂಕ್ಷ್ ಅವರು ಬೆಂಗಳೂರಿನ ಯಶಸ್ ಗೌಡ ಎದುರು ಹಾಗೂ ಸಾತ್ವಿಕ್ ಅವರು ಪಿ. ಅಭಿನವರನ್ನು ಮಣಿಸಿ ಮುನ್ನಡೆ ಕಾಯ್ದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.