ADVERTISEMENT

ಟೇಬಲ್ ಟೆನಿಸ್‌ ಟೂರ್ನಿ: ಸಹನಾ ಮೂರ್ತಿ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 15:39 IST
Last Updated 4 ಆಗಸ್ಟ್ 2025, 15:39 IST
ಪ್ರಶಸ್ತಿಯೊಂದಿಗೆ ಹಿಮಾಂಶಿ ಚೌಧರಿ, ಸಹನಾ ಮೂರ್ತಿ ಮತ್ತು ವರುಣ್‌ ಕಶ್ಯಪ್‌
ಪ್ರಶಸ್ತಿಯೊಂದಿಗೆ ಹಿಮಾಂಶಿ ಚೌಧರಿ, ಸಹನಾ ಮೂರ್ತಿ ಮತ್ತು ವರುಣ್‌ ಕಶ್ಯಪ್‌   

ಬೆಂಗಳೂರು: ಸಹನಾ ಮೂರ್ತಿ ಅವರು ನಗರದ ಮಲ್ಲೇಶ್ವರಂ ಅಸೋಸಿಯೇಷನ್‌ನಲ್ಲಿ ಸೋಮವಾರ ಆರಂಭಗೊಂಡ ಐದನೇ ರಾಜ್ಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್‌ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್‌ ಪ್ರಶಸ್ತಿಯನ್ನು ಗೆದ್ದುಕೊಂಡರು.

ಸಹನಾ ಅವರು ಫೈನಲ್‌ನಲ್ಲಿ 8-11, 12-10, 11-5, 11-7, 6-11, 11-5ರಿಂದ ತನಿಷ್ಕಾ ಕಾಲಭೈರವ ಅವನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಸಹನಾ  11-3, 11-5, 13-15, 14-12, 11-7ರಿಂದ ನೀತಿ ಅಗರವಾಲ್‌ ವಿರುದ್ಧ; ತನಿಷ್ಕಾ 6-11, 13-11, 11-5, 12-10, 9-11, 11-5ರಿಂದ ವೇದಲಕ್ಷ್ಮಿ ವಿರುದ್ಧ ಗೆಲುವು ಸಾಧಿಸಿದ್ದರು. 

19 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ಪ್ರಶಸ್ತಿಯನ್ನು ವರುಣ್‌ ಕಶ್ಯಪ್‌ ಗೆದ್ದರು. ಫೈನಲ್‌ನಲ್ಲಿ 11-5, 9-11, 10-12, 11-2, 11-7, 11-6ರಿಂದ ಅಭಿನವ್‌ ಮೂರ್ತಿ ಅವರನ್ನು ಮಣಿಸಿದರು.

ADVERTISEMENT

ಸೆಮಿಫೈನಲ್‌ನಲ್ಲಿ ಅಭಿನವ್‌ 11 - 8 , 11 - 5 , 7 - 11 , 11 - 5ರಿಂದ ಅರ್ಣವ್‌ ಎನ್‌ ವಿರುದ್ಧ; ವರುಣ್‌ 4 - 11 , 11 - 5 , 11 - 9 , 11 - 6ರಿಂದ ವಿಭಾಸ್‌ ವಿ.ಜಿ. ವಿರುದ್ಧ ಜಯ ಸಾಧಿಸಿದ್ದರು.

ಹಿಮಾಂಶಿ ಚೌಧರಿ ಅವರು 19 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ ಕಿರೀಟ ಮುಡಿಗೇರಿಸಿಕೊಂಡರು. ಹಿಮಾಂಶಿ ಫೈನಲ್‌ನಲ್ಲಿ 11 - 8 , 8 - 11 , 11 - 5 , 6 - 11 , 11 - 6 , 13 - 11ರಿಂದ ಹಿಯಾ ಸಿಂಗ್‌ ಅವರನ್ನು ಮಣಿಸಿದರು. 

ಸೆಮಿಫೈನಲ್‌ ಹಣಾಹಣಿಯಲ್ಲಿ ಹಿಮಾಂಶಿ 11 - 9 , 12 - 10 , 11 - 4ರಿಂದ ನೀತಿ ಅಗರವಾಲ್‌ ಎದುರು; ಹಿಯಾ ಸಿಂಗ್‌ 11 - 9 , 11 - 7 , 3 - 11 , 7 - 11 , 11 - 8ರಿಂದ ತನಿಷ್ಕಾ ಎದುರು ಗೆಲುವು ಸಾಧಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.