ADVERTISEMENT

ಕೋವಿಡ್: ಹಿರಿಯ ವಾಲಿಬಾಲ್ ಆಟಗಾರ ಕೆ.ಎಸ್. ಮಂಜುನಾಥ್ ನಿಧನ

​ಪ್ರಜಾವಾಣಿ ವಾರ್ತೆ
Published 19 ಮೇ 2021, 9:52 IST
Last Updated 19 ಮೇ 2021, 9:52 IST
ಕೆ.ಎಸ್. ಮಂಜುನಾಥ್
ಕೆ.ಎಸ್. ಮಂಜುನಾಥ್   

ಬೆಂಗಳೂರು: ಕರ್ನಾಟಕದ ಹಿರಿಯ ವಾಲಿಬಾಲ್ ಆಟಗಾರ ಕೆ.ಎಸ್. ಮಂಜುನಾಥ್ (49) ಕೋವಿಡ್‌ನಿಂದ ಬುಧವಾರ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.

ಜೂನಿಯರ್, ಯುವ ಮತ್ತು ಸೀನಿಯರ್ ವಿಭಾಗಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು.

ಏಜೀಸ್ (ಎಜಿಒಆರ್‌ಸಿ) ತಂಡವನ್ನು ಹತ್ತು ವರ್ಷ ಪ್ರತಿನಿಧಿಸಿದ್ದರು. ಅದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.