ಬೆಂಗಳೂರು: ಅಮೋಘ ಆಟ ಆಡಿದ ಅಥರ್ವ ನವರಂಗೆ ಮತ್ತು ಆಯುಷಿ ಅವರು ಮಲ್ಲೇಶ್ವರಂ ಸಂಸ್ಥೆ ಆಶ್ರಯದ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
ಶನಿವಾರ ನಡೆದ ಮಿನಿ ಕೆಡೆಟ್ ವಿಭಾಗದ ಫೈನಲ್ನಲ್ಲಿ ಅಥರ್ವ 12–10, 5–11, 10–12, 11–6, 11–3ಯಿಂದ ಎನ್.ಅರ್ಣವ್ ಅವರನ್ನು ಮಣಿಸಿದರು.
ಇದಕ್ಕೂ ಮೊದಲು ನಡೆದಿದ್ದ ಸೆಮಿಫೈನಲ್ ಹೋರಾಟಗಳಲ್ಲಿ ಅರ್ಣವ್ 11–6, 11–6, 11–5ರಲ್ಲಿ ಸಮರ್ಥ್ಯ ಮಲ್ಹೋತ್ರಾ ಎದುರೂ, ಅಥರ್ವ 9–11, 11–9, 11–7, 11–3ರಲ್ಲಿ ಸಿದ್ಧಾಂತ್ ಧರೀವಾಲ್ ವಿರುದ್ಧವೂ ಗೆದ್ದಿದ್ದರು.
ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಅರ್ಣವ್ 11–2, 11–1, 11–3ರಲ್ಲಿ ಆರ್.ಪ್ರಣವ್ ಎದುರೂ, ಸಮರ್ಥ್ಯ 11–9, 15–13, 5–11, 11–9ರಲ್ಲಿ ವೇದಾಂತ್ ವಶಿಷ್ಠ ಮೇಲೂ, ಸಿದ್ಧಾಂತ್ 11–6, 11–3, 11–3ರಲ್ಲಿ ಆರವ್ ಚಿಕ್ಕೆರೂರ್ ವಿರುದ್ಧವೂ, ಅಥರ್ವ 11–2, 11–6, 11–2ರಲ್ಲಿ ವರುಣ್ ಶಿಜು ಎದುರೂ ವಿಜಯಿಯಾಗಿದ್ದರು.
ಮಿನಿ ಕೆಡೆಟ್ ವಿಭಾಗದ ಬಾಲಕಿಯರ ಸಿಂಗಲ್ಸ್ ಫೈನಲ್ನಲ್ಲಿ ಆಯುಷಿ 11–5, 9–11, 11–3, 11–5ರಲ್ಲಿ ಅಕ್ಷತಾ ವಿರುದ್ಧ ಗೆದ್ದರು.
ಸೆಮಿಫೈನಲ್ನಲ್ಲಿ ಆಯುಷಿ 12–10, 11–8, 11–4ರಲ್ಲಿ ಶಿವಾನಿ ಮೇಲೂ, ಅಕ್ಷತಾ 8–11, 11–4, 6–11, 11–8, 13–11ರಲ್ಲಿ ಸ್ಮೃತಿ ವಿರುದ್ಧವೂ ವಿಜಯಿಯಾಗಿದ್ದರು.
ಕ್ವಾರ್ಟರ್ ಫೈನಲ್ ಹೋರಾಟಗಳಲ್ಲಿ ಆಯುಷಿ 11–3, 11–5, 11–10ರಲ್ಲಿ ಇರೀನಾ ಮೇಲೂ, ಶಿವಾನಿ 7–11, 11–7, 11–7, 11–6ರಲ್ಲಿ ಸುಮೇಧಾ ಎದುರೂ, ಸ್ಮೃತಿ 11–0, 11–1, 11–3ರಲ್ಲಿ ಸಾನ್ವಿ ಮೇಲೂ, ಅಕ್ಷತಾ 10–12, 11–8, 11–5, 11–8ರಲ್ಲಿ ತೇಜಸ್ವಿ ವಿರುದ್ಧವೂ ಗೆಲುವಿನ ತೋರಣ ಕಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.