ADVERTISEMENT

ಟೇಬಲ್ ಟೆನಿಸ್‌ ಟೂರ್ನಿ: ಆಕಾಶ್‌, ಸಹನಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 19:45 IST
Last Updated 21 ಸೆಪ್ಟೆಂಬರ್ 2019, 19:45 IST
ಪ್ರಶಸ್ತಿ ಗೆದ್ದ ಸಹನಾ ಎಚ್‌.ಮೂರ್ತಿ ಮತ್ತು ಆಕಾಶ್‌ ಕೆ.ಜೆ.
ಪ್ರಶಸ್ತಿ ಗೆದ್ದ ಸಹನಾ ಎಚ್‌.ಮೂರ್ತಿ ಮತ್ತು ಆಕಾಶ್‌ ಕೆ.ಜೆ.   

ಬೆಂಗಳೂರು: ಆಕಾಶ್‌ ಕೆ.ಜೆ. ಹಾಗೂ ಸಹನಾ ಎಚ್‌. ಮೂರ್ತಿ ಅವರು ಇಲ್ಲಿ ನಡೆದ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರಸಬ್‌ ಜೂನಿಯರ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು.

ಆಕಾಶ್‌ ಕೆ.ಜೆ., ಫೈನಲ್‌ ಪಂದ್ಯದಲ್ಲಿ ಸುಜನ್‌ ಆರ್‌. ಭಾರಧ್ವಾಜ್‌ ಅವರನ್ನು 11–8, 11–6, 11–5ರಿಂದ ಸೋಲಿಸಿದರು. ಸೆಮಿಫೈನಲ್‌ ಹಣಾಹಣಿಯಲ್ಲಿ ಆಕಾಶ್‌ ಅವರು ಸಮ್ಯಕ್‌ ಕಶ್ಯಪ್‌ ಎದುರು 10–12, 11–8, 11–9, 11–7ರಿಂದ ಗೆದ್ದಿದ್ದರು.

ಬಾಲಕಿಯರ ವಿಭಾಗದ ಫೈನಲ್‌ ಪಂದ್ಯದಲ್ಲಿ ಸಹನಾ , ತೃ‍ಪ್ತಿ ಪುರೋಹಿತ್‌ ಅವರನ್ನು 9–11, 11–7, 11–9, 11–9ರಿಂದ ಸೋಲಿಸಿ ಕಿರೀಟ ಮುಡಿಗೇರಿಸಿಕೊಂಡರು.

ADVERTISEMENT

ನಾಲ್ಕರ ಘಟ್ಟದ ಪಂದ್ಯದಲ್ಲಿ ಸಹನಾ ಅವರು ರೈನಾ ನಾರಾ ಅವರನ್ನು 11–6, 11–2, 11–2ರಿಂದ ಸೋಲಿಸಿ ಫೈನಲ್‌ಗೆ ಕಾಲಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.