ಬೆಂಗಳೂರು: ಸಮರ್ಥ್ ಕುರಡಿಕೇರಿ ಹಾಗೂ ಖುಷಿ ವಿ. ಅವರು ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ಸಿಂಗಲ್ಸ್ ವಿಭಾಗಗಳ ಪ್ರಶಸ್ತಿ ಜಯಿಸಿದ್ದಾರೆ.
ಪದಕರಹಿತರ ಸಿಂಗಲ್ಸ್ ವಿಭಾಗದಲ್ಲಿ (ಎನ್ಎಮ್ಎಸ್) ತವಂತ್ ನೀರ್ಲಜೆ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಸಮರ್ಥ್ 13-11, 11-7, 9-11, 11-9, 11-8ರಿಂದ ಶ್ರೇಯಸ್ ತೆಲಂಗ್ ಅವರನ್ನು ಮಣಿಸಿದರು.
ಸೆಮಿಫೈನಲ್ನಲ್ಲಿ ಸಮರ್ಥ್ 11–7, 11–9, 11–9, 13–11ರಿಂದ ಆಕಾಶ್ ಕೆ.ಜೆ. ಅವರ ಸವಾಲು ಮೀರಿದರೆ, ಶ್ರೇಯಸ್ 11–9, 8–11, 11–6, 14–12, 10–12, 12–14, 11–4ರಿಂದ ರಕ್ಷಿತ್ ಆರ್. ಬಾರಿಗಿಡದ ಎದುರು ಗೆದ್ದಿದ್ದರು.
ಖುಷಿ ಅವರು ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ 11–9, 11–6, 11–9, 8–11, 12–10ರಿಂದ ಮರಿಯಾ ರೋನಿ ಅವರನ್ನು ಸೋಲಿಸಿದರು. ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಖುಷಿ 11-6, 6-11, 5-11, 11-9, 11-9, 11-5ರಿಂದ ಕರುಣಾ ಜಿ. ಎದುರು ಜಯ ಸಾಧಿಸಿದ್ದರು. ಮತ್ತೊಂದು ಪಂದ್ಯದಲ್ಲಿ ಮರಿಯಾ 11-7, 12-10, 8-11, 16- 14, 11-8ರಿಂದ ಅನರ್ಘ್ಯಾ ಮಂಜುನಾಥ್ ಅವರನ್ನು ಸೋಲಿಸಿದ್ದರು.
ಪದಕರಹಿತರ ಸಿಂಗಲ್ಸ್ ವಿಭಾಗದಲ್ಲಿ ತವಂತ್ 11-7, 11-7, 11-8ರಿಂದ ರೋಹಿತ್ ರವಿ ಕುಮಾರ್ ಅವರನ್ನು ಮಣಿಸಿದರು. ಸೆಮಿಫೈನಲ್ನಲ್ಲಿ ತವಂತ್ 11-9, 12-10, 8-11, 11-7ರಿಂದ ಸಿದ್ಧಾಂತ್ ವಾಸನ್ ಎದುರು ಮತ್ತು ರೋಹಿತ್ ಅವರು 11-8, 11-8, 11-7ರಿಂದ ಸಂಜಯ್ ಮುರಳಿಕೃಷ್ಣ ವಿರುದ್ಧ ಗೆದ್ದು ಫೈನಲ್ಗೆ ಲಗ್ಗೆಯಿಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.