ADVERTISEMENT

ಶುಭಂ, ವೇದಾಂತ್, ತನಿಷ್ಕಾಗೆ ಪ್ರಶಸ್ತಿ

ಐದನೇ ರಾಜ್ಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 20:28 IST
Last Updated 6 ಆಗಸ್ಟ್ 2025, 20:28 IST
ಪ್ರಶಸ್ತಿ ಗೆದ್ದ ಶುಭಂ ತ್ರಿವೇದಿ, ತನಿಷ್ಕಾ ಕಪಿಲ್‌ ಕಾಲಭೈರವ ಹಾಗೂ ವೇದಾಂತ್ ವಸಿಷ್ಠ
ಪ್ರಶಸ್ತಿ ಗೆದ್ದ ಶುಭಂ ತ್ರಿವೇದಿ, ತನಿಷ್ಕಾ ಕಪಿಲ್‌ ಕಾಲಭೈರವ ಹಾಗೂ ವೇದಾಂತ್ ವಸಿಷ್ಠ   

ಬೆಂಗಳೂರು: ಶುಭಂ ತ್ರಿವೇದಿ ಅವರು ನಗರದ ಮಲ್ಲೇಶ್ವರಂ ಅಸೋಸಿಯೇಷನ್‌ನಲ್ಲಿ ನಡೆಯುತ್ತಿರುವ ಐದನೇ ರಾಜ್ಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್‌ ಟೂರ್ನಿಯಲ್ಲಿ 17 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು.

ಶುಭಂ ಫೈನಲ್‌ ಪಂದ್ಯದಲ್ಲಿ 12–10, 11–6, 11–9ರಿಂದ ಅಥರ್ವ ನವರಂಗೆ ಅವರನ್ನು ಮಣಿಸಿದರು. ಸೆಮಿಫೈನಲ್‌ ಪಂದ್ಯಗಳಲ್ಲಿ ಅಥರ್ವ 11–7, 7–11, 12–10, 11–7ರಿಂದ ಗೌರವ್‌ ಗೌಡ ವಿರುದ್ಧ; ಶುಭಂ 13–11, 11–7, 7–11, 11–9ರಿಂದ ರೇಯಾಂಶ್‌ ಜಲನ್‌ ವಿರುದ್ಧ ಗೆಲುವು ಸಾಧಿಸಿದ್ದರು.

15 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ಪ್ರಶಸ್ತಿಯನ್ನು ವೇದಾಂತ್ ವಸಿಷ್ಠ ಗೆದ್ದರು. ವೇದಾಂತ್‌ ಫೈನಲ್‌ ಪಂದ್ಯದಲ್ಲಿ 12–14, 7–11, 11–9, 14–12, 14–12ರಿಂದ ಎಂ.ತಮೋಘ್ನ ಎದುರು ಜಯ ಸಾಧಿಸಿದರು.

ADVERTISEMENT

ಸೆಮಿಫೈನಲ್‌ ಪಂದ್ಯಗಳಲ್ಲಿ ತಮೋಘ್ನ 11–5, 9–11, 5–11, 11–7, 11–4ರಿಂದ ಎಂ.ಸಿದ್ಧಾಂತ್‌ ವಿರುದ್ಧ; ವೇದಾಂತ್‌ 11–4, 14–12, 11–7ರಿಂದ ರೇಯಾಂಶ್‌ ಜಲನ್‌ ಅವರನ್ನು ಪರಾಭವಗೊಳಿಸಿದ್ದರು.

ತನಿಷ್ಕಾ ಕಪಿಲ್‌ ಕಾಲಭೈರವ 15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ ಕಿರೀಟ ಮುಡಿಗೇರಿಸಿಕೊಂಡರು. ತನಿಷ್ಕಾ ಫೈನಲ್‌ ಪಂದ್ಯದಲ್ಲಿ 14–12, 11–6, 13–11ರಿಂದ ರಾಶಿ ವಿ. ರಾವ್‌ ಅವರನ್ನು ಮಣಿಸಿದರು. ಸೆಮಿಫೈನಲ್‌ ಪಂದ್ಯಗಳಲ್ಲಿ ತನಿಷ್ಕಾ 11–8, 11–6, 11–3ರಿಂದ ಮಿಹಿಕಾ ಉಡುಪ ಎದುರು; ರಾಶಿ 11–9, 11–8, 11–8ರಿಂದ ಕ್ರಿಶಾ ಕರ್ಕೆರಾ ವಿರುದ್ಧ ಗೆಲುವು ಸಾಧಿಸಿದ್ದರು.

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.