ಮೈಸೂರು: ಕಿರಣ್ ಕುಮಾರ್ ರಾಜು ಭಾನುವಾರ ಇಲ್ಲಿ ಕೊನೆಗೊಂಡ ರೈಡ್ ಎ ಸೈಕಲ್ ಪ್ರತಿಷ್ಠಾನದ ‘ಟೂರ್ ಆಫ್ ನೀಲಗಿರೀಸ್’ ಸೈಕಲ್ ರ್ಯಾಲಿಯ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದರು.
60 ಸೈಕ್ಲಿಸ್ಟ್ಗಳು ಎಂಟು ದಿನ ವಿವಿಧ ವಿಭಾಗಗಳಲ್ಲಿ ತಮ್ಮ ಸಾಮರ್ಥ್ಯ ತೋರಿದರು. ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಕಡಿದಾದ ಕಣಿವೆಗಳು, ಕಾಫಿ-ಚಹಾ ತೋಟಗಳು, ಮೂರು ಅಭಯಾರಣ್ಯಗಳನ್ನು ದಾಟಿ 850 ಕಿ.ಮೀ. ಕ್ರಮಿಸಿದರು. ಸ್ಪರ್ಧಿಗಳು ಅಂತಿಮ ದಿನ ಊಟಿಯಿಂದ ಪಿಕಾರ, ನಡುವೆಟ್ಟಂ, ಗುಡಲೂರು ಮಾರ್ಗವಾಗಿ 90 ಕಿ.ಮೀ. ಕ್ರಮಿಸಿ ಮೈಸೂರು ತಲುಪಿದರು.
ಫಲಿತಾಂಶ: ಪುರುಷರ ವಿಭಾಗ (45 ವರ್ಷದೊಳಗಿನವರು): ಕಿರಣ್ ಕುಮಾರ್ ರಾಜು–1, ದೀಪಂಕರ್ ಪಾಲ್–2, ವೆಂಕಟೇಶ್ವರ ರಾವ್–3.
ಹಿರಿಯರ ವಿಭಾಗ (45 ವರ್ಷ ಮೇಲಿನವರು): ತರುಣ್ ಕುಮಾರ್–1, ಮುರಳಿ ರಾಮಕೃಷ್ಣನ್–2, ಪ್ರದೀಪ್ ನಾಯರ್–3. .
ಮಹಿಳೆಯರ ವಿಭಾಗ: ಅವಂತಿ ಬಿನಿವಾಲೆ–1, ಧನಶ್ರೀ–2, ಆ್ಯನ್ ಸುಸಾನ್ ಜರಿಯಾ–3.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.