ಬೆಂಗಳೂರು: ಸಿ.ವಿ.ಎಲ್. ಶಾಸ್ತ್ರಿ ಸ್ಮರಣಾರ್ಥ ರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ ಡಿಸೆಂಬರ್ 9ರಿಂದ 12ರವರೆಗೆ ನಡೆಯಲಿದೆ.
ಇಲ್ಲಿಯ ಮಲ್ಲೇಶ್ವರಂ ಕೆನರಾ ಯೂನಿಯನ್ನಿಂದ ಆಯೋಜಿಸಲ್ಪಡುವ ಟೂರ್ನಿಯಲ್ಲಿ 11, 13, 15, 17, 19 ವರ್ಷದೊಳಗಿನವರು, ಪುರುಷ, ಮಹಿಳೆ ಮತ್ತು ನಾನ್ ಮೆಡಲ್ಸ್ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.https://karnatakatta.web.appನಲ್ಲಿ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮುಖ್ಯ ರೆಫರಿ ಕೆ.ಆರ್. ಮಂಜುನಾಥ್ (ಮೊಬೈಲ್ ಸಂಖ್ಯೆ98809 77827) ಅವರನ್ನು ಸಂಪರ್ಕಿಸಬೇಕು ಎಂದು ಕರ್ನಾಟಕ ಟೇಬಲ್ ಟೆನಿಸ್ ಸಂಸ್ಥೆ (ಕೆಟಿಟಿಎ) ಕಾರ್ಯದರ್ಶಿ ಟಿ.ಜಿ. ಉಪಾಧ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.