ADVERTISEMENT

ಟಿಟಿ: ಶ್ರೀಕಾಂತ್, ಯಶಸ್ವಿನಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 19:35 IST
Last Updated 12 ಅಕ್ಟೋಬರ್ 2019, 19:35 IST

ಬೆಂಗಳೂರು: ಶ್ರೀಕಾಂತ್ ಕಶ್ಯಪ್ ಮತ್ತು ಯಶಸ್ವಿನಿ ಘೋರ್ಪಡೆ ಇಲ್ಲಿ ನಡೆಯುತ್ತಿರುವ ಕೆನರಾ ಬ್ಯಾಂಕ್ ಕಪ್ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಜೂನಿಯರ್ ಬಾಲಕ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದರು.

ಶನಿವಾರ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ಶ್ರೀಕಾಂತ್ 6–11, 12–14, 11–6, 11–9, 11–6, 11–5ರಲ್ಲಿ ಆಕಾಶ್ ಕೆ.ಜೆ ವಿರುದ್ಧ ಜಯ ಗಳಿಸಿದರು. ಯಶಸ್ವಿನಿ 9–11, 11–5, 8–11, 11–9, 11–5, 5–11, 11–7ರಲ್ಲಿ ಕರುಣಾ ಗಜೇಂದ್ರ ವಿರುದ್ಧ ಗೆಲುವು ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT