ADVERTISEMENT

ವಾಲಿಬಾಲ್‌ ಪಂದ್ಯ: ಸೆಂಟ್ ಕ್ಲಾರೆನ್ಸ್ ತಂಡಗಳಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:33 IST
Last Updated 22 ಜುಲೈ 2019, 19:33 IST
ಪ್ರಶಸ್ತಿ ಪಡೆದ ಸೇಂಟ್ ಕ್ಲಾರೆನ್ಸ್ ಶಾಲೆಯ ಬಾಲಕಿಯರ ತಂಡ
ಪ್ರಶಸ್ತಿ ಪಡೆದ ಸೇಂಟ್ ಕ್ಲಾರೆನ್ಸ್ ಶಾಲೆಯ ಬಾಲಕಿಯರ ತಂಡ   

ಬೆಂಗಳೂರು:ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ನಡೆದ ‘ರಾಜ್ಯಮಟ್ಟದ ಅಂತರ್ ಶಾಲಾ ಕೌನ್ಸಿಲರ್ ಕಪ್’ ವಾಲಿಬಾಲ್ ಕ್ರೀಡಾಕೂಟದಲ್ಲಿ ಬೆಂಗಳೂರು ಉತ್ತರ ವಿಭಾಗದ ಸೇಂಟ್ ಕ್ಲಾರೆನ್ಸ್ ಶಾಲೆಯ ಬಾಲಕರು ಹಾಗೂ ಬಾಲಕಿಯರ ತಂಡಗಳುಚಾಂಪಿಯನ್ ಆಗಿ ಹೊರ ಹೊಮ್ಮಿದವು.

ಸ್ಪರ್ಧೆಯಲ್ಲಿ140 ಶಾಲೆಗಳ ತಂಡಗಳು ಭಾಗವಹಿಸಿದ್ದವು.ಚಿಕ್ಕಮಕ್ಕಳ ವಿಭಾಗದಲ್ಲಿ ಶಾರದಾ ಹೈಯರ್ ಪ್ರೈಮರಿ ಶಾಲೆ ಹಾಗೂ ಆರಾಧನಾ ಶಾಲೆಗಳು ಪ್ರಶಸ್ತಿ ಪಡೆದವು.

ಪಾಲಿಕೆ ಸದಸ್ಯ ಎನ್.ನಾಗರಾಜ್ ಹಾಗೂ ಕಾಂಗ್ರೆಸ್‌ ‌ಮುಖಂಡ ಮಲ್ಲಿಕಾರ್ಜುನ್ ಅವರು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.