ADVERTISEMENT

ಟೆನಿಸ್‌: ಕ್ವಾರ್ಟರ್‌ ಫೈನಲ್‌ಗೆ ನಿಕ್ಷೇಪ್‌

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2019, 19:30 IST
Last Updated 14 ಮಾರ್ಚ್ 2019, 19:30 IST
ಬಿ.ಆರ್‌.ನಿಕ್ಷೇಪ್‌
ಬಿ.ಆರ್‌.ನಿಕ್ಷೇಪ್‌   

ಬೆಂಗಳೂರು: ಕರ್ನಾಟಕದ ಬಿ.ಆರ್‌. ನಿಕ್ಷೇಪ್‌, ಮಹಾರಾಷ್ಟ್ರದ ಪಂಚಗಣಿಯಲ್ಲಿ ನಡೆಯುತ್ತಿರುವ ಎಐಟಿಎ ಟೆನಿಸ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ನಿಕ್ಷೇಪ್‌, 6–3, 6–2 ರಿಂದ ಮಹಾರಾಷ್ಟ್ರದ ಅಥರ್ವ ಶರ್ಮಾ ಅವರನ್ನು ಮಣಿಸಿದರು.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಬಿ.ಆರ್‌.ನಿಕ್ಷೇಪ್‌ ಮತ್ತು ಅಲೆಕ್ಸ್‌ ಸೋಲಂಕಿ ಜೋಡಿಯು 6–4, 7–6 (8–6)ರಿಂದ ಅಗ್ರ ಶ್ರೆಯಾಂಕಿತ ಮಹಾರಾಷ್ಟ್ರದ ಸಾಹಿಲ್‌ ಗವಾರೆ ಮತ್ತು ಜಯೇಶ್‌ ಪುಂಗಾಲಿಯಯಾ ಜೋಡಿಯನ್ನು ಸೋಲಿಸಿ ಕ್ವಾರ್ಟರ್‌ ಫೈನಲ್ ಹಂತ ತಲುಪಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.