ADVERTISEMENT

ಸಿಂಗಲ್ಸ್‌ನಲ್ಲಿ ಸಿಗಲಿಲ್ಲ ಗೆಲುವು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 17:19 IST
Last Updated 13 ಫೆಬ್ರುವರಿ 2020, 17:19 IST

ಬೆಂಗಳೂರು: ಪುರುಷರ ಸಿಂಗಲ್ಸ್‌ನಲ್ಲಿ ಗುರುವಾರ ಭಾರತಕ್ಕೆ ನಿರಾಸೆ ಕಾಡಿತು.

ಹಾಲಿ ಚಾಂಪಿಯನ್‌ ಪ್ರಜ್ಞೇಶ್‌ ಗುಣೇಶ್ವರನ್‌, ರನ್ನರ್‌ ಅಪ್‌ ಸಾಕೇತ್‌ ಮೈನೇನಿ, ಚೊಚ್ಚಲ ಟೂರ್ನಿಯಲ್ಲಿ (2017) ಪ್ರಶಸ್ತಿ ಜಯಿಸಿದ್ದ ಸುಮಿತ್‌ ನಗಾಲ್‌, ರಾಮಕುಮಾರ್‌ ರಾಮನಾಥನ್‌ ಮತ್ತು ಯುವ ಆಟಗಾರ ನಿಕಿ ಪೂಣಚ್ಚ ಅವರು ಬೆಂಗಳೂರು ಓಪನ್‌ ಟೂರ್ನಿಯ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿದರು.

ಟೂರ್ನಿಯಲ್ಲಿ ಏಳನೇ ಶ್ರೇಯಾಂಕ ಹೊಂದಿದ್ದ ಪ್ರಜ್ಞೇಶ್‌ 6–7, 0–6ರಿಂದ ಫ್ರಾನ್ಸ್‌ನ ಬೆಂಜಮಿನ್‌ ಬೊಂಜಿ ವಿರುದ್ಧ ಆಘಾತ ಕಂಡರು.

ADVERTISEMENT

ವಿಶ್ವ ರ‍್ಯಾಂಕಿಂಗ್‌ನಲ್ಲಿ 124ನೇ ಸ್ಥಾನದಲ್ಲಿರುವ ಪ್ರಜ್ಞೇಶ್‌, ಹಲವು ತಪ್ಪುಗಳನ್ನು ಮಾಡಿ ಮೊದಲ ಸೆಟ್‌ ಕೈಚೆಲ್ಲಿದರು. ಎರಡನೇ ಸೆಟ್‌ನಲ್ಲೂ ಅವರು ಮಂಕಾದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 368ನೇ ಸ್ಥಾನದಲ್ಲಿರುವ ಬೊಂಜಿ, ಮೂರು ಬಾರಿ ಭಾರತದ ಆಟಗಾರನ ಸರ್ವ್‌ ಮುರಿದು ಏಕಪಕ್ಷೀಯವಾಗಿ ಸೆಟ್‌ ಜಯಿಸಿದರು.

ಸುಮಿತ್‌ ನಗಾಲ್‌ 3–6, 3–6ರಲ್ಲಿ ಬ್ಲಾಜ್‌ ರೋಲಾ ಎದುರೂ, ನಿಕಿ ಪೂಣಚ್ಚ 5–7, 3–6ರಲ್ಲಿ ಜಪಾನ್‌ನ ಯುಯಿಚಿ ಸುಗಿಟಾ ವಿರುದ್ಧವೂ, ಸಾಕೇತ್‌ 4–6, 7–5, 2–6ರಲ್ಲಿ ಥಾಮಸ್‌ ಫಾಬಿಯಾನೊ ಮೇಲೂ, ರಾಮಕುಮಾರ್‌ 6–7, 1–6ರಲ್ಲಿ ಇಲ್ಯಾ ಇವಾಷ್ಕಾ ವಿರುದ್ಧವೂ, ಸಿದ್ಧಾರ್ಥ್‌ ರಾವತ್‌ 5–7, 4–6ರಲ್ಲಿ ಜೂಲಿಯನ್‌ ಒಸ್ಲೆಪ್ಪೊ ಎದುರೂ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.