ಬೆಂಗಳೂರು: ಅಮೋಘ ಆಟವಾಡಿದ ದೇವ್ ಶಿವಶಂಕರ್ ಅವರು ಅಗ್ರಶ್ರೇಯಾಂಕದ ಜೇಸನ್ ಡೇವಿಡ್ಗೆ ಸೋಲುಣಿಸಿ ಕೆಎಸ್ಎಲ್ಟಿ–ಎಐಟಿಎ 16 ವರ್ಷದೊಳಗಿವರ ಟ್ಯಾಲೆಂಟ್ ಸಿರೀಸ್ ಟೆನಿಸ್ ಟೂರ್ನಿ ಸೆಮಿಫೈನಲ್ ಪ್ರವೇಶಿಸಿದರು.
ಕೆಎಸ್ಎಲ್ಟಿಎ ಅಂಗಣದಲ್ಲಿ ಬುಧವಾರ ನಡೆದ ಬಾಲಕರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ಫೈನಲ್ ಹಣಾಹಣಿಯಲ್ಲಿ ದೇವ್ 6–4, 6–1ರಿಂದ ಜೇಸನ್ ಅವರನ್ನು ಮಣಿಸಿದರು.ದೇವ್ ಅರ್ಹತಾ ಸುತ್ತಿನಿಂದ ಗೆದ್ದು ಮುಖ್ಯ ಸುತ್ತು ಪ್ರವೇಶಿಸಿದ್ದರು.
ಬಾಲಕರ ವಿಭಾಗದ ಎಂಟರಘಟ್ಟದಇನ್ನುಳಿದ ಪಂದ್ಯಗಳಲ್ಲಿ ಶ್ರೀನಿಕೇತ್ ಕಣ್ಣನ್ 7-6 , 6-1ರಿಂದ ಸೂರಜ್ ವಿಜಯಕುಮಾರ್ ವಿರುದ್ಧ, ಕ್ರಿಶ್ ಅಜಯ್ ತ್ಯಾಗಿ 6–1, 6–0ರಿಂದ ಶ್ರೀಕರ ಧೋನಿ ಎದುರು, ಸೆಹಜ್ ಸಿಂಗ್ ಪವಾರ್ 6-0, 6-0ರಿಂದ ಅಮನ್ ಪವಾರ್ ವಿರುದ್ಧ ಗೆದ್ದು ನಾಲ್ಕರ ಸೆಮಿಫೈನಲ್ಗೆ ಲಗ್ಗೆಯಿಟ್ಟರು.
ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ಫೈನಲ್ ಪಂದ್ಯಗಳಲ್ಲಿ ಅಗ್ರಶ್ರೇಯಾಂಕದ ಗಗನಾ ಮೋಹನ್ ಕುಮಾರ್ 7-5, 5-7, 6-1ರಿಂದ ಹೃದಯೇಶಿ ಪೈ ಎದುರು, ವನ್ಯಾ ಶ್ರೀವಾಸ್ತವ್ 6-3, 6-1ರಿಂದ ಮಹಿಕಾ ಸುರವರಂ ಎದುರು, ಶ್ರೀ ತನ್ವರಿ ದಾಸರಿ 4-6, 6-1, 6-2ರಿಂದ ಮೃಣಾಲಿ ನವಾಡ ವಿರುದ್ಧ, ಅನ್ವಿ ಪುನಗಂಟಿ 3-6, 6-1, 6-4ರಿಂದ ಸುಶ್ಮಿತಾ ರವಿ ಎದುರು ಜಯಿಸಿ ಸೆಮಿಫೈನಲ್ ತಲುಪಿದರು.
ಪುರುಷರ ಡಬಲ್ಸ್ನಲ್ಲಿ, ಅನೂಪ್ ಕೇಶವಮೂರ್ತಿ–ಕ್ರಿಶ್ ಅಜಯ್ ತ್ಯಾಗಿ 6-0, 6-0ರಿಂದ ಆಹಿಲ್ ಅಯಾಜ್–ಹರೂನ್ ಸಯ್ಯದ್ ಎದುರು, ದೇವ್ ಶಿವಶಂಕರ್–ಶಿವ ಪ್ರಸಾದ್ 7-6 , 6-2ರಿಂದ ಅಮನ್ ರಾವ್– ವಿಷ್ಣು ಬಾಲಚಂದರ್ ವಿರುದ್ಧ, ಪ್ರಕಾಶ್ ಸರನ್–ಕುಶಾಲ್ ಎಸ್.ಪಿ. 7-6, 6-0ರಿಂದ ಶಿವಾಜಿ ಪಿಲ್ಲಾ–ಅಕ್ಷತ್ ಹೆನಿಶ್ ಎದುರು, ಜೇಸನ್ ಡೇವಿಡ್–ಶ್ರೀನಿಕೇತ್ ಕಣ್ಣನ್ 6-2, 6-3ರಿಂದ ಹವಿಶ್ ಕುಮಾರ್ ಬಡ್ಡಿರೆಡ್ಡಿ–ಪವನ್ ಗಣೇಶನ್ ಎದುರು ಗೆದ್ದು ನಾಲ್ಕರ ಘಟ್ಟ ತಲುಪಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.