ಚೆನ್ನೈ: ಭಾರತದ ಪ್ರಜ್ಞೇಶ್ ಗುಣೇಶ್ವರನ್, ಚೆನ್ನೈ ಓಪನ್ ಚಾಲೆಂಜರ್ ಎಟಿಪಿ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.
ಬುಧವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಪ್ರಜ್ಞೇಶ್ 6–4, 6–4 ನೇರ ಸೆಟ್ಗಳಿಂದ ಜರ್ಮನಿಯ ಡೇನಿಯಲ್ ಅಲ್ಟಮೀರ್ ಅವರನ್ನು ಸೋಲಿಸಿದರು.
ಇನ್ನೊಂದು ಪಂದ್ಯದಲ್ಲಿ ಸಾಕೇತ್ ಮೈನೇನಿ 6–4, 6–3ರಲ್ಲಿ ಎನ್.ವಿಜಯ್ ಸುಂದರ್ ಪ್ರಶಾಂತ್ ವಿರುದ್ಧ ಗೆದ್ದರು.
ಅರ್ಜುನ್ ಖಾಡೆ 6–3, 6–2ರಲ್ಲಿ ಜೋಸ್ ಹರ್ನಾಂಡೇಜ್ ಫರ್ನಾಂಡೀಸ್ಗೆ ಆಘಾತ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.