ಬೆಂಗಳೂರು: ಎರಡನೇ ಶ್ರೇಯಾಂಕ ಪಡೆದಿರುವ ಬೆಂಗಳೂರಿನ ಆಟಗಾರ್ತಿ ವನ್ಷಿತಾ ಪಟಾನಿಯಾ 6–3, 6–1 ರಿಂದ ಜೋಯೆಲ್ ನಿಕೋಲಿ ಅವರನ್ಹು ನೇರ ಸೆಟ್ಗಳಿಂದ ಸೋಲಿಸಿ ಸಿ.ವಿ.ಜಿ.ನಾಯ್ಡು ಸ್ಮಾರಕ ಎಐಟಿಎ ಮಹಿಳಾ ಟೆನಿಸ್ ಟೂರ್ನಿಯ ಸಿಂಗಲ್ಸ್ ಪ್ರಿಕ್ವಾರ್ಟರ್ಫೈನಲ್ ಪ್ರವೇಶಿಸಿದರು.
ಬೌರಿಂಗ್ ಇನ್ಸ್ಟಿಟ್ಯೂಟ್ ಆಶ್ರಯದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಬುಧವಾರ ಅಗ್ರ ಶ್ರೇಯಾಂಕದ ನಾರಾಯಣ ಪ್ರತಿಭಾ ಪ್ರಸಾದ್ (ಹೈದರಾಬಾದ್) 6–0, 6–1 ರಿಂದ ಸಾಯಿ ದಿಯಾ ಬಾಲಾಜಿ (ಚೆನ್ನೈ) ಅವರನ್ನು ಸೋಲಿಸಿದರು.
ಎರಡನೇ ಸುತ್ತಿನ ಇತರ ಪಂದ್ಯಗಳಲ್ಲಿ ಕಿರಣ್ ರಾಣಿ 6–3, 6–1 ರಿಂದ ವೇದಾ ವರ್ಷಿತಾ ವಿರುದ್ಧ; ವುಟುಕುರು ಲಕ್ಷ್ಮಿಸಾಹಿತಿ ರೆಡ್ಡಿ (ಆಂಧ್ರ) 6–4, 6–2 ರಿಂದ ಶೇಖ್ ಮುಷಾರ್ತ್ ಅಂಜುಂ ವಿರುದ್ಧ; ಮಹಾರಾಷ್ಟ್ರದ ಪ್ರಗತಿ ಸೋಲನಕರ್ 6–4, 6–2 ರಿಂದ ದೀಪಾ ಎಲ್.ವಿ. ವಿರುದ್ಧ; ಶರೋನ್ 6–0, 6–1 ರಿಂದ ನೇಹಾ ಬಾಲಾಜಿ ವಿರುದ್ಧ ಜಯಗಳಿಸಿದರು.
ಸಾಯಿ ಯೆಡ್ಡುಲ (ಆಂಧ್ರ) 6–2, 6–2 ರಿಂದ ಬೆಂಗಳೂರಿನ ಅಪೇಕ್ಷಾ ಸೋಲಂಕಿ ಅವರನ್ನು; ಶ್ರೀವಲ್ಲಿ ರಷ್ಮಿಕಾ 6–0, 6–1 ರಿಂದ ಅದಿತಿ ನಾರಾಯಣ್ ಅವರನ್ನು ಸೋಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.