ಬೆಂಗಳೂರು: ದೇಶದ ಮುಂಚೂಣಿ ಮೊಬೈಲ್ ತಯಾರಿಕಾ ಕಂಪೆನಿ ಸ್ಯಾಮ್ಸಂಗ್ ಇಂಡಿಯಾ, ತನ್ನ ಗ್ರಾಹಕರು ಉಚಿತವಾಗಿ ಮೊಬೈಲ್ ಪರದೆ (ಸ್ಕ್ರೀನ್) ಬದಲಾಯಿಸಿಕೊಳ್ಳಲು ‘ನೆವೆರ್ ಮೈಂಡ್’ ಎಂಬ ಕೊಡುಗೆಯನ್ನು ಗುರುವಾರ ಘೋಷಿಸಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ಘೋಷಿಸಿರುವ ‘ನೆವರ್ ಮೈಂಡ್’ ಯೋಜನೆಯಲ್ಲಿ ಗ್ರಾಹಕರು ಕೇವಲ ₹999 ದುರಸ್ತಿ ಶುಲ್ಕ ಪಾವತಿಸಿ ಒಂದು ಬಾರಿ ಉಚಿತವಾಗಿ ಮೊಬೈಲ್ ಸ್ಕ್ರೀನ್ ಬದಲಾಯಿಸಿಕೊಳ್ಳಬಹುದು. ಸೆಪ್ಟೆಂಬರ್ 21ರಿಂದ ಅಕ್ಟೋಬರ್ 21ರ ಅವಧಿಯಲ್ಲಿ ಖರೀದಿಸಿದ ಮೊಬೈಲ್ಗಳಿಗೆ ಮಾತ್ರ ಈ ಕೊಡುಗೆ ಅನ್ವಯಿಸಲಿದೆ. ಖರೀದಿ ದಿನದಿಂದ ಮುಂದಿನ 12 ತಿಂಗಳ ಅವಧಿಯಲ್ಲಿ ಗ್ರಾಹಕರು ಯಾವಾಗ ಬೇಕಾದರೂ ಸ್ಕ್ರೀನ್ ಬದಲಾಯಿಸಿಕೊಳ್ಳಬಹುದು.
‘₹ 9 ಸಾವಿರಕ್ಕಿಂತ ಹೆಚ್ಚಿನ ಎಲ್ಲ ಶ್ರೇಣಿಯ ಮೊಬೈಲ್ಗಳಿಗೂ ಈ ಕೊಡುಗೆ ಅನ್ವಯಿಸಲಿದೆ ಸ್ಯಾಮ್ಸಂಗ್ ಜೆ ಶ್ರೇಣಿಯ ಮೊಬೈಲ್ಗಳಿಗೆ ಕರ್ನಾಟಕ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದ’. ಎಂದು ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಅಸಿಮ್ ವಾರ್ಸಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.