ADVERTISEMENT

‘ಇನ್ನೊಂದು ಟಿಎಂಸಿ ಅಡಿ ನೀರು ಹರಿಸಿ’

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 6:22 IST
Last Updated 24 ಏಪ್ರಿಲ್ 2017, 6:22 IST

ಜಮಖಂಡಿ: ‘ಜಿಎಲ್‌ಬಿಸಿ ಕಾಲುವೆಗೆ ಹಾಗೂ ಕೃಷ್ಣಾನದಿಗೆ ಈಗ ಹರಿಸಿರುವ ನೀರು ಸಮಾಧಾನಕರವಾಗಿಲ್ಲ. ಆದ್ದರಿಂದ ಇನ್ನೊಂದು ಟಿಎಂಸಿ ಅಡಿ ನೀರನ್ನು ಕೊಯ್ನಾ ಜಲಾಶಯದಿಂದ ಕೃಷ್ಣಾನದಿಗೆ ಹರಿಸಬೇಕು’ ಎಂದು ಮಾಜಿ ಶಾಸಕ ಬಾಬುರೆಡ್ಡಿ ತುಂಗಳ ಒತ್ತಾಯಿಸಿದ್ದಾರೆ.

ದೂರವಾಣಿ ಮೂಲಕ ‘ಪ್ರಜಾವಾಣಿ’ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ‘ಈಗ ಹಿಡಕಲ್‌ ಜಲಾಶಯದಿಂದ ಜಿಎಲ್‌ಬಿಸಿ ಕಾಲುವೆ ಬಿಟ್ಟಿರುವ ನೀರಿಗಾಗಿ ಹಾಹಾಕಾರ ಎದ್ದಿದೆ. ಮೇಲ್ಭಾಗದ ಬಲಾಢ್ಯರಿಂದ ಹಿಡಕಲ್‌ ಜಲಾಶಯದಿಂದ ಬಿಟ್ಟಿರುವ ನೀರು ಭಾನುವಾರ ಸಂಜೆವರೆಗೂ ಮುಧೋಳ ತಾಲ್ಲೂಕು ತಲುಪಿಲ್ಲ. ಹೀಗಾಗಿ ರೊಚ್ಚಿಗೆ ಎದ್ದಿರುವ ರೈತ ಸಮುದಾಯ ಹೋರಾಟದ ಹಾದಿಯನ್ನು ಹಿಡಿಯಲಿದ್ದಾರೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT