ಹಗರಿಬೊಮ್ಮನಹಳ್ಳಿ: ಎಸ್ಬಿಎಂ ಬ್ಯಾಂಕ್ನ ವ್ಯವಸ್ಥಾಪಕ ಎಂದು ಕರೆಮಾಡಿ ಎಟಿಎಂ ಪಾಸ್ವರ್ಡ್ ಪಡೆದು ಗ್ರಾಹಕರೊಬ್ಬರಿಗೆ ₹15ಸಾವಿರ ಪಂಗನಾಮ ಹಾಕಿದ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.
ಪಟ್ಟಣದ ಖಾಸಗಿ ಶಾಲೆಯೊಂದರ ಶಿಕ್ಷಕ ವಿಜಯಕುಮಾರ್ ಎನ್ನುವವರು ಹಣ ಕಳೆದುಕೊಂಡಿದ್ದಾರೆ. ಬಿಹಾರ ಮೂಲದ ವ್ಯಕ್ತಿಯೊಬ್ಬ ಬ್ಯಾಂಕ್ ವ್ಯವಸ್ಥಾಪಕ ಎಂದು ಅರೆಬರೆ ಕನ್ನಡದಲ್ಲಿ ಮಾತನಾಡಿ ಶಿಕ್ಷಕನನ್ನು ನಂಬಿಸಿದ್ದಾನೆ. ನಿಮ್ಮ ಖಾತೆಯಲ್ಲಿ ₹ 125 ಕಡಿತಗೊಂಡಿದ್ದು ನಿಮ್ಮ ಖಾತೆಗೆ ಪುನಃ ಜಮೆ ಮಾಡಬೇಕಿದೆ. ಎಟಿಎಂ ಕಾರ್ಡ್ ಮೇಲಿನ ಸಂಖ್ಯೆ ತಿಳಿಸಿ ಎಂದು ಕರೆಯಲ್ಲಿ ಕೇಳಿದ್ದಾರೆ.
ಶಿಕ್ಷಕ ನಂಬಿ ಇತ್ತ ಎಟಿಎಂ ಪೇಸ್ ಸಂಖ್ಯೆ ತಿಳಿಸುತ್ತಿದ್ದಂತೆ ಮೊಬೈಲ್ಗೆ ಮೆಸೇಜ್ ಬಂದಿದೆ, ಈ ನಂಬರ್ಗೆ ಪಾಸ್ವರ್ಡ್ ಕಳಿಸುವಂತೆ ಮೊಬೈಲ್ ನಂಬರ್ ನೀಡಿದ್ದಾರೆ. ಇದನ್ನೆಲ್ಲ ನಂಬಿ ಪಾಸ್ವರ್ಡ್ ಕಳುಹಿಸಿದ ಕೂಡಲೇ ಖಾತೆಯಿಂದ ಮೊದಲು ₹ 10 ಸಾವಿರ ಡ್ರಾ ಮಾಡಿಕೊಂಡ ವಂಚಕ ಐದು ನಿಮಿಷದ ನಂತರ ಮತ್ತೇ ₹ 5ಸಾವಿರ ಪಡೆದಿದ್ದಾರೆ.
ಈ ಕುರಿತಂತೆ ಅನುಮಾನಗೊಂಡ ಶಿಕ್ಷಕ ಖಾತೆಯಲ್ಲಿದ್ದ ಬಾಕಿ ₹ 7 ಸಾವಿರ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ. ಈ ಕುರಿತಂತೆ ಪಟ್ಟಣದ ಠಾಣೆಯಲ್ಲಿ ಶಿಕ್ಷಕ ದೂರು ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.