ADVERTISEMENT

ಅವ್ಯವಸ್ಥೆಯ ಆಗರ ಈ ಪರಿವೀಕ್ಷಣಾ ಮಂದಿರ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 7:02 IST
Last Updated 22 ಡಿಸೆಂಬರ್ 2014, 7:02 IST
ಪರಿವೀಕ್ಷಣಾ ಮಂದಿರದಲ್ಲಿನ  ಬಿರುಕುಬಿಟ್ಟಿರುವ  ಗೋಡೆ
ಪರಿವೀಕ್ಷಣಾ ಮಂದಿರದಲ್ಲಿನ ಬಿರುಕುಬಿಟ್ಟಿರುವ ಗೋಡೆ   

ವಿಜಯಪುರ: ಪಟ್ಟಣದ ಪ್ರವಾಸಿ ಮಂದಿರವನ್ನು ಸೂಕ್ತವಾಗಿ ನಿರ್ವಹಿ­ಸಲು ಲೋಕೋಪಯೋಗಿ ಇಲಾಖೆ ಅಧಿ­ಕಾರಿಗಳು ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ಜಿ.ಚಂದ್ರಣ್ಣ ದೂರಿದ್ದಾರೆ.

ಪರಿವೀಕ್ಷಣಾ ಮಂದಿರದಲ್ಲಿ ಕೂರಲು ಸರಿಯಾದ ಆಸನ ವ್ಯವಸ್ಥೆ ಇಲ್ಲ. ಗೋಡೆಗಳೆಲ್ಲಾ ಹಾಳಾಗಿ ಬಣ್ಣ ಕಳೆದುಕೊಂಡಿವೆ, ಸೊಳ್ಳೆ, ತಿಗಣೆಗಳ ಆವಾಸ ಸ್ಥಾನವಾಗಿದೆ. ಉದ್ಯಾನ ನೀರು ಕಾಣದೆ ಒಣಗಿದೆ ಎಂದರು.

ಹೊರಗಿನ ಅತಿಥಿಗಳು ಬಂದರೆ ಪರಿ­ವೀಕ್ಷಣಾ ಮಂದಿರಕ್ಕೆ ಕರೆದು­ಕೊಂಡು ಬರಲು ಬೇಸರವಾಗುತ್ತದೆ. ತಾವು ಶಾಸ­ಕರಿದ್ದಾಗ ಹೆಚ್ಚುವರಿ ಕೊಠ­ಡಿ­ಗ­ಳನ್ನು ನಿರ್ಮಿಸಿ ಬರುವ ಅತಿಥಿಗಳಿಗೆ ವ್ಯವ­ಸ್ಥಿತವಾದ ಆಸನಗಳ ವ್ಯವಸ್ಥೆ­ಮಾಡ­ಲಾಗಿತ್ತು. ಈಗ ಅತಿಥಿ­ಗಳು ಬಂದರೆ ಕಿತ್ತು ಹೋದ ಆಸನಗಳ ಮೇಲೆ ಕೂರಿಸಬೇಕಾದ ಪರಿಸ್ಥಿತಿಯಿದೆ ಎಂದರು. ಆದಷ್ಟು ಶೀಘ್ರವಾಗಿ ಇಲ್ಲಿನ ಅವ್ಯ­ವಸ್ಥೆ ಸರಿಪಡಿಸದಿದ್ದಲ್ಲಿ ಲೋಕೋ­­ಪಯೋಗಿ ಇಲಾಖೆ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.