ADVERTISEMENT

ಕವಿಗೋಷ್ಠಿಯಲ್ಲಿ ರೈತರ ಆತ್ಮಹತ್ಯೆ ಪ್ರತಿಧ್ವನಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2015, 11:59 IST
Last Updated 4 ನವೆಂಬರ್ 2015, 11:59 IST

ವಿಜಯಪುರ: ಪಟ್ಟಣದ ಗಾಂಧಿ ಚೌಕದಲ್ಲಿ ಅಖಿಲ ಕರ್ನಾಟಕ ಮಿತ್ರ ಸಂಘದ ವತಿಯಿಂದ ಆಯೋಜಿಸಿದ್ದ ರಾಜ್ಯೋತ್ಸವ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪಟ್ಟಣದ ಕವಿಗಳು ಕವನ ವಾಚಿಸಿದರು.

ಶಿಕ್ಷಕ ಚಂದ್ರಶೇಖರ್ ಹಡಪದ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಸಿ.ಎಂ.ವೀರಣ್ಣ, ಮಾ. ಸುರೇಶ್ ಬಾಬು, ಆಶಾ ಕಮತರ್, ಭಾಗ್ಯಾಶಾಂ, ಕೃಷ್ಣಮೂರ್ತಿ, ರಘುರಾಮ, ನಾಗರಾಜು, ಗವಿಸಿದ್ದಯ್ಯ, ಜೆ.ಆರ್. ಮುನಿವೀರಣ್ಣ ರೇಣುಕಾ ಚಂದ್ರಶೇಖರ್ ಮುಂತಾದ ಕವಿಗಳು ತಮ್ಮ ಸ್ವರಚಿತ ಕವನ ವಾಚಿಸಿದರು.

ಹೆಚ್ಚಿನ ಕವಿಗಳು ರೈತರ ಆತ್ಮಹತ್ಯೆ, ಜಾತಿ ವ್ಯವಸ್ಥೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ, ಅಸಹಿಷ್ಣುತೆ, ರಾಜ್ಯೋತ್ಸವ, ಕನ್ನಡ ಭಾಷೆಯ ಬಗ್ಗೆಯ ತಮ್ಮ ವಿಚಾರಗಳನ್ನು ಕವನಗಳ ರೂಪದಲ್ಲಿ ಮಂಡಿಸಿದರು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕವಿ ಚಂದ್ರಶೇಖರ ಹಡಪದ ಅವರು ಮಾತನಾಡಿ, ‘ಕವಿಗಳಿಗೆ ಅಧ್ಯಯನ ಅತ್ಯಂತ ಅವಶ್ಯಕ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.