ADVERTISEMENT

ಗಮನ ಸೆಳೆದ ಚಿತ್ತಾಕರ್ಷಕ ಗಾಳಿಪಟ

​ಪ್ರಜಾವಾಣಿ ವಾರ್ತೆ
Published 23 ಜುಲೈ 2014, 9:22 IST
Last Updated 23 ಜುಲೈ 2014, 9:22 IST
ದೊಡ್ಡಬಳ್ಳಾಪುರದಲ್ಲಿ ಸೋಮವಾರ ಗಾಳಿಪಟ ಕಲಾ ಸಂಘದ ವತಿಯಿಂದ ನಡೆದ ರಾಜ್ಯಮಟ್ಟದ ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕಿಮ್ಸ್‌ ಅಧ್ಯಕ್ಷ ಬಿ. ಮುನೇಗೌಡ ಬಹುಮಾನ ವಿತರಿಸಿದರು
ದೊಡ್ಡಬಳ್ಳಾಪುರದಲ್ಲಿ ಸೋಮವಾರ ಗಾಳಿಪಟ ಕಲಾ ಸಂಘದ ವತಿಯಿಂದ ನಡೆದ ರಾಜ್ಯಮಟ್ಟದ ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕಿಮ್ಸ್‌ ಅಧ್ಯಕ್ಷ ಬಿ. ಮುನೇಗೌಡ ಬಹುಮಾನ ವಿತರಿಸಿದರು   

ದೊಡ್ಡಬಳ್ಳಾಪುರ: ತಾಲ್ಲೂಕಿನ ಗಾಳಿ­ಪಟ ಕಲಾಸಂಘದ ವತಿಯಿಂದ ಪಟ್ಟ­ಣದಲ್ಲಿ ಸೋಮವಾರ ರಾಜ್ಯಮಟ್ಟದ ಗಾಳಿಪಟ ಸ್ಪರ್ಧೆ ನಗರದ ಮೇಘಾಂ­ಜಲಿ ಕಲ್ಯಾಣ ಮಂದಿರದ ಸಮೀಪ ನಡೆಯಿತು. ಶಾಸಕ ಟಿ. ವೆಂಕಟರಮಣಯ್ಯ ಗಾಳಿ­ಪಟ ಹಾರಿಸುವ ಸ್ಪರ್ಧೆಗೆ ಚಾಲನೆ ನೀಡಿದರು. ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಸುಮಾರು ೧೫೦ ಸ್ಪರ್ಧಿಗಳು ಭಾಗವಹಿಸಿದ್ದರು.

ಇತ್ತೀಚೆಗೆ ದೇಶದೆಲ್ಲೆಡೆ ಹೆಚ್ಚಾ­ಗುತ್ತಿರುವ ಅತ್ಯಾಚಾರ ಪ್ರಕರಣದ ಹಿನ್ನೆ­ಲೆ­ಯಲ್ಲಿ ‘ಅತ್ಯಾಚಾರಿಗಳಿಗೆ ಶಿಕ್ಷೆ­ಯಾಗಲಿ’ ‘ಶಾಶ್ವತ ನೀರಾವರಿ ಯಾವಾಗ?’ ‘ಕತ್ತಲಲ್ಲಿ ಕರ್ನಾಟಕ’ ‘ನೇತ್ರದಾನ ಮಾಡಿ’ ‘ನೀರನ್ನು ಸಂರಕ್ಷಿಸಿ’  ಮತ್ತಿತರ ಸಂದೇಶಗಳನ್ನು ಹೊತ್ತ ನೂರಾರು ಗಾಳಿಪಟಗಳು ಗಮನ ಸೆಳೆದವು.

ಇದರೊಂದಿಗೆ ಆಂಜ­ನೇಯ ಪಟ, ಗಣೇಶ ಪಟ, ಬುಗುರಿ ಪಟ ಮುಂತಾದ ಚಿತ್ತಾಕರ್ಷಕ  ಹಾಗೂ ಸಂದೇಶ ಸಾರುವ ಗಾಳಿಪ­ಟ­ಗಳು ಮೈದಾನದಲ್ಲಿ ಸೇರಿದ್ದ ಸಹಸ್ರಾರು ನಾಗರಿಕರಿಗೆ ಮನರಂಜನೆಯ ಜೊತೆಗೆ ಸಂಭ್ರಮ, ಮುದ ನೀಡಿದವು.

ಬಹುಮಾನ ವಿತರಣಾ ಸಮಾರಂಭ­ದಲ್ಲಿ ಮಾತನಾಡಿದ ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎನ್. ಪ್ರಭುದೇವ್, ಗಾಳಿಪಟ ಕಲೆಯಲ್ಲಿ ದೊಡ್ಡಬಳ್ಳಾಪುರ ತನ್ನದೇ ಆದ ಛಾಪು ಮೂಡಿಸಿದೆ. ಜಾನ­ಪದ ಲೋಕದ ರೂವಾರಿ ಎಚ್.ಎಲ್. ನಾಗೇಗೌಡ ಅವರು ಜಾನಪದ ಕಲಾವಿದರನ್ನು, ಗಾಳಿಪಟ ಕಲೆಯನ್ನು ಉತ್ತೇಜಿಸಿದ್ದರು. ಪಾರಂಪರಿಕ ಉತ್ಸವ­ಗಳಲ್ಲಿ  ಗಾಳಿಪಟ ಹಾರಿಸುವ ಕಲೆ ಮುಖ್ಯವಾಗಿದೆ.
ಭಾವೈಕ್ಯ­ತೆಯೊಂದಿಗೆ ಕಲೆಯನ್ನು ಉತ್ತೇ­ಜಿಸುವ ದಿಸೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿ­ರುವುದು ಶ್ಲಾಘನೀಯ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಡಾ.ಎಚ್.ಜಿ. ವಿಜಯಕುಮಾರ್, ದೊಡ್ಡ-ಬಳ್ಳಾಪುರ ಗಾಳಿಪಟ ಕಲಾ­ಸಂಘದ ಅಧ್ಯಕ್ಷ ಎಚ್.ಸಿ. ಜಗದೀಶ್,   ಕಿಮ್ಸ್ ಅಧ್ಯಕ್ಷ ಬಿ. ಮುನೇಗೌಡ, ಅಂತರಾಷ್ಟ್ರೀಯ ಗಾಳಿ­ಪಟು ಕ್ರೀಡಾಳು ಸಂದೇಶ್‌ಗಡ್ಡಿ, ನಗರಸಭಾ ಸದಸ್ಯರಾದ ಕೆ.ಎಚ್‌. ವೆಂಕಟರಾಜು, ಎಚ್.ಎಸ್. ಶಿವಶಂಕರ್, ಕೆ.ಜಿ.ರಘುರಾಂ, ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.