ADVERTISEMENT

ಉಸಿರುಗಟ್ಟಿಸಿ ವೃದ್ಧೆಯ ಕೊಲೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 19:43 IST
Last Updated 14 ಮಾರ್ಚ್ 2017, 19:43 IST

ಬೆಂಗಳೂರು: ಬಾಗಲಗುಂಟೆ ಸಮೀಪದ ಪ್ರಶಾಂತನಗರದಲ್ಲಿ ಮಂಗಳವಾರ ಅನಸೂಯಮ್ಮ (58) ಎಂಬುವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ.

‘ಆಸ್ತಿಗಾಗಿ ಅನಸೂಯಮ್ಮ ಅವರ ಮೈದುನನ ಮಗ ಆಂಜನೇಯಸ್ವಾಮಿ ಎಂಬಾತ ಈ ಕೃತ್ಯವೆಸಗಿದ್ದಾನೆ’ ಎಂದು ಅನಸೂಯಮ್ಮ ಅವರ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.

‘ಪೈಪ್‌ಲೈನ್‌ ರಸ್ತೆಯಲ್ಲಿ ವಾಸವಾಗಿದ್ದ ಅನಸೂಯಮ್ಮ ಬೆಳಿಗ್ಗೆ 10ರ ಸುಮಾರಿಗೆ ಸ್ನಾನ ಮಾಡಲು ಎರಡನೇ ಮಹಡಿಯಲ್ಲಿದ್ದ ಮನೆಗೆ ತೆರಳಿದ್ದರು. ಈ ವೇಳೆ ಮನೆಗೆ ನುಗ್ಗಿದ ದುಷ್ಕರ್ಮಿ, ಅವರ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ’ ಎಂದು ಬಾಗಲಗುಂಟೆ ಪೊಲೀಸರು ತಿಳಿಸಿದರು.

ADVERTISEMENT

‘ಅನಸೂಯಮ್ಮ ಅವರ ಪತಿ ಗಂಗಪ್ಪ ಮೃತಪಟ್ಟಿದ್ದಾರೆ. ಈ ದಂಪತಿಗೆ ಮಕ್ಕಳಿರಲಿಲ್ಲ. ಅವರು ತಾಯಿ ರಂಗಮ್ಮ (78) ಅವರೊಂದಿಗೆ ವಾಸವಿದ್ದರು. ಅವರ ಹೆಸರಿನಲ್ಲಿ ಎರಡು ಅಂತಸ್ತಿನ ಕಟ್ಟಡ ಇದ್ದು, ನೆಲ ಮಹಡಿಯ ಮನೆಯಲ್ಲಿ ವಾಸವಾಗಿದ್ದರು. ಉಳಿದ ನಾಲ್ಕು ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದರು. ಇತ್ತೀಚೆಗೆ ಎರಡನೇ ಅಂತಸ್ತಿನಲ್ಲಿರುವ ಮನೆ ಖಾಲಿಯಾಗಿತ್ತು.’

‘ಅನಸೂಯಮ್ಮ ಅವರನ್ನು ಕೊಲೆ ಮಾಡಿದರೆ ಆಸ್ತಿ ನನ್ನ ಪಾಲಾಗುತ್ತದೆ ಎಂಬ ಕಾರಣಕ್ಕೆ ಅವರ ಮೈದುನನ ಮಗ ಆಂಜನೇಯಸ್ವಾಮಿ ಈ ಕೃತ್ಯ ಎಸಗಿರುವ ಶಂಕೆ ಇದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.