ADVERTISEMENT

ಹೊನ್ನು ಸಿದ್ಧಾರ್ಥ ವಿರುದ್ಧ ದೂರು: ವರದಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2014, 19:52 IST
Last Updated 23 ನವೆಂಬರ್ 2014, 19:52 IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಸಿ.ಬಿ. ಹೊನ್ನು ಸಿದ್ಧಾರ್ಥ ಅವರ ವಿರುದ್ಧ ಕೇಂದ್ರದ ಪ್ರಾಧ್ಯಾಪಕಿಯರಾದ ಡಾ. ಎಂ. ಸುಮಿತ್ರಾ, ಡಾ. ಎಂ. ಗಿರಿರಾಜ್‌ ಮತ್ತು ಡಾ. ಎಚ್‌. ಶಶಿಕಲಾ ಅವರು ನೀಡಿರುವ ದೂರಿಗೆ ಸಂಬಂಧಿಸಿದಂತೆ ಕೂಲಂಕಷ ವಿಚಾರಣೆ ನಡೆಸಿ 10 ದಿನಗಳ ಒಳಗೆ ವರದಿ ನೀಡುವಂತೆ ಸೂಚಿಸಿ ರಾಜ್ಯ ಮಹಿಳಾ ಆಯೋಗವು ವಿವಿಯ ಕುಲಸಚಿವರಿಗೆ ಪತ್ರ ಬರೆದಿದೆ.

ಇದರ ಜೊತೆಗೆ, ಇದಕ್ಕೂ ಮುನ್ನ ಪ್ರಾಧ್ಯಾಪಕಿಯರು ನೀಡಿರುವ ದೂರಿನ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತ ವರದಿಯನ್ನು ಸಮಗ್ರ ದಾಖಲೆಗಳೊಂದಿಗೆ ನೀಡುವಂತೆಯೂ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರು ಪತ್ರದಲ್ಲಿ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.