ಕೃಷ್ಣರಾಜಪುರ: ‘ರಾಷ್ಟ್ರ ರಕ್ಷಣೆಯಲ್ಲಿ ಸೈನಿಕರ ಪಾತ್ರ ಅನನ್ಯ ಮತ್ತು ಅವಿಸ್ಮರಣೀಯವಾಗಿದೆ. ಅವರಿಂದಲೇ, ನಾವು ನೆಮ್ಮದಿಯಿಂದ ಜೀವನ ಸಾಗಿಸುವಂತಾಗಿದೆ’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.
ಸ್ಥಳೀಯ ದೂರವಾಣಿ ನಗರ ಐಟಿಐ ವಿದ್ಯಾಮಂದಿರ ರಂಗಮಂದಿರದಲ್ಲಿ ನಡೆದ ಅಖಿಲ ಭಾರತ ವಾಯು ಸೈನಿಕ ಶಿಬಿರದ ಸಮಾರೋಪ ಮತ್ತು ಬಹುಮಾನ ವಿತರಣಾ ಕಾರ್ಯ ಕ್ರಮದಲ್ಲಿ ವಿವಿಧ ಸ್ಫರ್ಧೆಗಳಲ್ಲಿ ವಿಜೇತ ರಾದವರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.
‘ಸೈನಿಕರು ದೇಶಭಕ್ತಿಯಿಂದ ದೇಶದ ಗಡಿಯನ್ನು ದಿನ ನಿತ್ಯವೂ ತಮ್ಮ ಪ್ರಾಣದ ಹಂಗು ತೊರೆದು ಕಾಯುತ್ತಾರೆ. ಅವರ ತ್ಯಾಗ, ಬಲಿದಾನಗಳನ್ನು ಎಷ್ಟು ಸ್ಮರಿಸಿ ದರೂ ಕಡಿಮೆಯಾಗಿದೆ’ ಎಂದರು.
‘ಎನ್ಸಿಸಿ ಕೆಡೆಟ್ಗಳು ದೇಶವನ್ನು ರಕ್ಷಿಸುವ ಸೈನಿಕ ಕೆಲಸವನ್ನು ಆಯ್ದುಕೊಂಡು ದೇಶ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.