ADVERTISEMENT

ಮಹಾವೀರರ ಆದರ್ಶ ಇಂದಿಗೂ ಪ್ರಸ್ತುತ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2017, 8:41 IST
Last Updated 10 ಏಪ್ರಿಲ್ 2017, 8:41 IST

ಚಾಮರಾಜನಗರ: ‘ಭಗವಾನ್‌ ಮಹಾವೀರರು ಜಗತ್ತಿಗೆ ಅಹಿಂಸಾ ಧರ್ಮ ಸಾರಿದ ಮಹಾನ್‌ ಸಂತ. ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ’ ಎಂದು ಬಿಜೆಪಿ ಜಿಲ್ಲಾ ಮಂಡಲ ಅಧ್ಯಕ್ಷ ಎಚ್.ಎಂ. ಬಸವಣ್ಣ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಭಗವಾನ್‌ ಮಹಾವೀರರ ಜಯಂತಿ ಕಾರ್ಯಕ್ರಮದಲ್ಲಿ ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಮಹಾವೀರರು ಜಗತ್ತಿಗೆ ಅಹಿಂಸಾ ತತ್ವ ನೀಡಿದ್ದಾರೆ. ಪ್ರಾಣಿ ಹಿಂಸೆ ಮಾಡ ಬಾರದು. ಭೂಮಿಯಲ್ಲಿ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ ಎಂದು ಪ್ರತಿಪಾದಿಸಿದ್ದಾರೆ. ಅವರ ತತ್ವಾದರ್ಶ ವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ADVERTISEMENT

ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಮಂಡಲ ಉಪಾಧ್ಯಕ್ಷ ಅಮಚವಾಡಿ ಚಂದ್ರಶೇಖರ್, ಮುಖಂಡರಾದ ಸಿ.ಎಸ್.ಮಹದೇವನಾಯಕ, ಶಿವಣ್ಣ, ಸುಂದರರಾಜ್, ಪವನ್‌ ಜೈನ್, ರಾಮ ಸಮುದ್ರ ಶಿವಣ್ಣ, ಸುಬ್ರಮಣ್ಯ ಹಾಗೂ ಪ್ರಕಾಶ್ ಸೇರಿದಂತೆ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.