ADVERTISEMENT

ಅಪಘಾತ: ಇಬ್ಬರ ಸಾವು, ೩೦ ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2017, 5:26 IST
Last Updated 7 ಆಗಸ್ಟ್ 2017, 5:26 IST
ಅಪಘಾತ: ಇಬ್ಬರ ಸಾವು, ೩೦ ಮಂದಿಗೆ ಗಾಯ
ಅಪಘಾತ: ಇಬ್ಬರ ಸಾವು, ೩೦ ಮಂದಿಗೆ ಗಾಯ   

ಚಿತ್ರದುರ್ಗ: ನಿಂತಿದ್ದ ಲಾರಿಗೆ ಕೆಎಸ್ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಚಾಲಕ ಸೇರಿ ಇಬ್ಬರು ಮೃತಪಟ್ಟ ಘಟನೆ ಮೊಳಕಾಲ್ಮರು  ತಾಲ್ಲೂಕಿನ ಬಿ.ಜಿ.ಕೆರೆ ಸಮೀಪ ಸೋಮವಾರ ಬೆಳಗಿನ ಜಾವ ನಡೆದಿದೆ.


ಬಿಜಿ ಕೆರೆ ಸಮೀಪದ ಹೊಸಕೆರೆ ಸೇತುವೆ ಬಳಿ ಘಟನೆ ನಡೆದಿದೆ.ಲಾರಿ ಹಾಗೂ ಬಸ್ ನ ಇಬ್ಬರೂ ಚಾಲಕರು ಸ್ಥಳದಲ್ಲೇ ಸಾವು.  30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಬಳ್ಳಾರಿ, ಚಿತ್ರದುರ್ಗ ಚಳ್ಳಕೆರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.


ರಾಯಚೂರು ಮೂಲದ ನಾಗಗೌಡ (30) ಮೃತ ಬಸ್ ಚಾಲಕ. ಮತ್ತೋರ್ವನ ಗುರುತು ಪತ್ತೆಯಾಗಿಲ್ಲ.

ADVERTISEMENT


ಕೆಟ್ಟು ನಿಂತಿದ್ದ ಮಹಾರಾಷ್ಟ್ರ ಮೂಲದ  ಲಾರಿಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದಿದೆ.ಸ್ಥಳಕ್ಕೆ ಮೊಳಕಾಲ್ಮೂರು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.