ADVERTISEMENT

ಕೆರೆ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 8:46 IST
Last Updated 6 ಸೆಪ್ಟೆಂಬರ್ 2017, 8:46 IST
ಹರಪನಹಳ್ಳಿ ಒತ್ತುವರಿ ಮಾಡಿಕೊಂಡಿದ್ದ ಹಿರೇಕೆರೆ ಜಾಗವನ್ನು ತಹಶೀಲ್ದಾರ್‌ ಮಂಗಳವಾರ ತೆರವುಗೊಳಿಸಿದರು.
ಹರಪನಹಳ್ಳಿ ಒತ್ತುವರಿ ಮಾಡಿಕೊಂಡಿದ್ದ ಹಿರೇಕೆರೆ ಜಾಗವನ್ನು ತಹಶೀಲ್ದಾರ್‌ ಮಂಗಳವಾರ ತೆರವುಗೊಳಿಸಿದರು.   

ಹರಪನಹಳ್ಳಿ: ರಾಜಸೋಮಶೇಖರ ನಾಯಕ ಕಟ್ಟಿಸಿದ ಕೆರೆ ಜಾಗ ಆಕ್ರಮಿಸಿ ಸಾರ್ವಜನಿಕರು ನಿರ್ಮಿಸಿಕೊಂಡಿದ್ದ ಕಟ್ಟಡಗಳನ್ನು ತಹಶೀಲ್ದಾರ್‌ ಕೆ.ಗುರು ಬಸವರಾಜ್‌ ಮಂಗಳವಾರ ತೆರವುಗೊಳಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ ಸರ್ವೆ ನಂ. 260/ಬಿ ಒಟ್ಟು 78 ಸೆಂಟ್ಸ್‌ ಸರ್ಕಾರಿ ಕೆರೆ ಜಾಗವನ್ನು ಸಾರ್ವಜನಿಕರು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದರು. ಇದು ರಾಜಾ ಕಾಲುವೆಯಾಗಿದ್ದು, ಕೆರೆ ನೀರು ಮತ್ತು ಪಟ್ಟಣದ ನೀರು ಸರಾಗವಾಗಿ ಹರಿದು ಹೋಗಲು ಅಡಚಣೆಯಾಗಿತ್ತು. ಈ ಕುರಿತು ಸಾರ್ವಜನಿಕರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.

ಭೂ ಮಾಪನ ಇಲಾಖೆಯಿಂದ ಅಳತೆ ಮಾಡಿಸಿ ಆಕ್ರಮಿಸಿಕೊಂಡ ಸರ್ಕಾರಿ ಜಮೀನನ್ನು ವಶಕ್ಕೆ ಪಡೆದಿದ್ದೇವೆ ಎಂದು ಬಸವರಾಜ್‌ ತಿಳಿಸಿದರು. ತೆರವು ಕಾರ್ಯಾಚರಣೆಯಲ್ಲಿ ಕಂದಾಯ ಇಲಾಖೆ ಅರವಿಂದ್‌, ಪರುಶುರಾಮ್‌, ಸುಧೀರ್‌ನಾಯ್ಕ, ಪುರಸಭೆ ಅಧಿಕಾರಿಗಳಾದ ಪ್ರಭು ಉಪಸ್ಥಿತರಿದ್ದರು. ಆರ್‌ಟಿಐ ಕಾರ್ಯಕರ್ತ ಶ್ರೀಧರ್‌ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.