ಕೊಪ್ಪಳ: ನಗರದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಮಾಹಿತಿ ತಲುಪಿಸಲು ವಾಟ್ಸ್ ಆಪ್ ಸಂಖ್ಯೆ ನೀಡಲಾಗಿದೆ. ಮೊಬೈಲ್ ಸಂಖ್ಯೆ : 9482283312ಕ್ಕೆ ವಾಟ್ಸ್ ಆಪ್ ಸಂದೇಶ ಕಳುಹಿಸಬೇಕು.
ಜಾತ್ರಾ ಮಹೋತ್ಸವದ ಮಾಹಿತಿಗಳ ಸಂದೇಶ ಮೊಬೈಲ್ಗೆ ಬರುತ್ತವೆ. ಇದೇ ಮಾಹಿತಿಯನ್ನು ಫೇಸ್ಬುಕ್ ಮೂಲಕವೂ ಪಡೆಯಬಹುದು. ವಿಳಾಸ: www.facebook.com/gavimath.koppal
ಹೆಚ್ಚಿನ ಮಾಹಿತಿಗೆ ಮಂಜುನಾಥ ಉಲ್ಲತ್ತಿ ಮೊ. 99862 69442 ಅವರನ್ನು ಸಂಪರ್ಕಿಸಬಹುದು ಎಂದು ಗವಿಮಠದ ಪ್ರಕಟಣೆ ತಿಳಿಸಿದೆ. ಜಾತ್ರಾ ಸಂದರ್ಭದಲ್ಲಿ ಉಚಿತ ಆರೋಗ್ಯ ಸೇವೆ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಜಾತ್ರೆಯ ಆವರಣ, ಮಹಾದಾಸೋಹದ ಪ್ರಸಾದ ನಿಲಯ ಹಾಗೂ ಪೊಲೀಸ್ ಚೌಕಿ ಬಳಿ ಈ ವ್ಯವಸ್ಥೆ ಮಾಡಲಾಗಿದೆ. ಜ. 2ರಿಂದ 17ರವರೆಗೆ ಈ ಸೇವೆ ಲಭ್ಯ ಇರುತ್ತದೆ. ಹೆಚ್ಚಿನ ಮಾಹಿತಿಗೆ ಡಾ.ಕೆ.ಬಿ ಹಿರೇಮಠ ಮೊಬೈಲ್ ಸಂಖ್ಯೆ 9845631442 ಗವಿಸಿದ್ಧೇಶ್ವರ ಆಯುರ್ವೇದ ಕಾಲೇಜಿನ ಆಸ್ಪತ್ರೆ ದೂರವಾಣಿ: 08539 -221989 ಸಂಪರ್ಕಿಸಬೇಬಹುದು ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.