ಶ್ರೀನಿವಾಸಪುರ: ಇಲ್ಲಿನ ಮಾರುಕಟ್ಟೆಯಲ್ಲಿ ಬಹುತೇಕ ಸೊಪ್ಪಿನ ಬೆಲೆಗಳು ಹೆಚ್ಚಿವೆ. ಸತತ ಮಳೆಯಿಂ ಕೊತ್ತಂಬರಿ ಸೊಪ್ಪು ಅಂಗಮಾರಿ ರೋಗಕ್ಕೆ ತುತ್ತಾಗಿದೆ. ಇತರ ಸೊಪ್ಪುಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಹಾಗಾಗಿ ಬೆಲೆ ಗಗನಮುಖಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪಟ್ಟಣದ ಮಾರುಕಟ್ಟೆಯಲ್ಲಿ ಒಂದು ಕಟ್ಟು ನಾಟಿ ಕೊತ್ತಂಬರಿ ಸೊಪ್ಪು ₹ 60 ರಿಂದ 70 ರವರೆಗೆ ಮಾರಾಟವಾಗುತ್ತಿದೆ. ದಂಟು ಹಾಗೂ ಅರಿವೆ ಸೊಪ್ಪು ಒಂದು ಕಟ್ಟಿಗೆ ₹ 25ಕ್ಕೆ ಮಾರಾಟವಾಗುತ್ತಿದೆ. ಮಳೆಯಾಗಿರುವುದರಿಂದ ಹೊಲಗಳಲ್ಲಿ ಸಾಂಪ್ರದಾಯಿಕ ಸೊಪ್ಪುಗಳು ಸಿಗುತ್ತಿವೆ. ಕೆಲವರು ಅದನ್ನು ಕಿತ್ತು ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.