ಲಿಂಗಸುಗೂರು: ‘ಸ್ಥಳೀಯ ತಹಶೀಲ್ದಾರ್ ಶಿವಾನಂದ ಸಾಗರ್ ವರ್ಗಾವಣೆ ವಿರೋಧಿಸಿ ಪ್ರಗತಿಪರ ಸಂಘಟನೆಗಳು ಹಣದ ಆಮಿಷಕ್ಕೆ ಹೋರಾಟ ನಡೆಸಿವೆ ಎಂದು ಹೇಳಿರುವುದು ಸತ್ಯಕ್ಕೆ ದೂರದ ಸಂಗತಿ’ ಎಂದು ಪ್ರಗತಿಪರ ಸಂಘಟನೆ ಒಕ್ಕೂಟದ ಮುಖಂಡ ಚಿನ್ನಪ್ಪ ಕಂದಳ್ಳಿ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ತಾಲ್ಲೂಕಿನಲ್ಲಿ ದಕ್ಷತೆ, ಪ್ರಾಮಾಣಿಕ ಅಧಿಕಾರಿಗಳ ಮೇಲೆ ಅನ್ಯಾಯ, ದೌರ್ಜನ್ಯ ನಡೆದಾಗಲೆಲ್ಲ ತಾವು ಹೋರಾಟ ನಡೆಸುತ್ತಾ ಬಂದಿದ್ದೇವೆ. ಶಿವಾನಂದ ಸಾಗರ್ ಅವರು ಓರ್ವ ಪ್ರಾಮಾಣಿಕ, ದಕ್ಷ ಆಡಳಿತಗಾರರು ಎಂಬುದಕ್ಕೆ ಅವರ ವರ್ಗಾವಣೆ ವಿರೋಧಿಸಿ ಪ್ರತಿಭಟನೆ ನಡೆಸಿದೆ. ಇದರಲ್ಲಿ ಯಾವುದೇ ಆಮಿಷವಿಲ್ಲ’ ಎಂದು ಹೂಲಗೇರಿ ಹೇಳಿಕೆಗೆ ತಿರುಗೇಟು ನೀಡಿದರು.
ಮುಖಂಡರಾದ ಹನುಮಂತಪ್ಪ ಕುಣಿಕೆಲ್ಲೂರು, ಲಿಂಗಪ್ಪ ಪರಂಗಿ, ಸಿದ್ದಲಿಂಗೇಶ್ವರ ಪಾಟೀಲ, ಜಿಲಾನಿಪಾಷ, ದುರುಗಪ್ಪ ಅಗ್ರಹಾರ, ಹನುಮಂತರಾಯ ನೆಲೋಗಿ, ದುರುಗಪ್ಪ ಡಬ್ಬೇರಮಡು, ಚೆನ್ನಬಸವ, ಸುರೇಶ, ಹುಲಗಪ್ಪ ಕೆಸರಟ್ಟಿ, ದೇವರಾಜ, ಬಸವರಾಜ, ಕುಬೇರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.