ADVERTISEMENT

ಅಕ್ಷರದ ಜತೆ ಕೃಷಿ ಬದುಕು ಕಲಿಸಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2017, 5:48 IST
Last Updated 23 ಡಿಸೆಂಬರ್ 2017, 5:48 IST

ಮಾಗಡಿ: ಮಕ್ಕಳಿಗೆ ಅಕ್ಷರ ಕಲಿಕೆಯ ಜೊತೆಗೆ ವಿನಾಶದತ್ತ ಸಾಗಿರುವ ಕೃಷಿ ಬದುಕನ್ನು ಪರಿಚಯಿಸುವ ಅಗತ್ಯವಿದೆ ಎಂದು ಶಿಕ್ಷಣ ತಜ್ಞ ಎಚ್‌.ಎಚ್‌.ಗಂಗರಾಜು ತಿಳಿಸಿದರು. ಪಟ್ಟಣದ ಹೊಸಪೇಟೆಯ ಮಾರುತಿ ಪಬ್ಲಿಕ್‌ ಸ್ಕೂಲ್‌ನಲ್ಲಿ ಶುಕ್ರವಾರ ನಡೆದ ಮಾರುಕಟ್ಟೆ ಮೇಳದಲ್ಲಿ ಕ್ಯಾಲೆಂ ಡರ್‌ ಬಿಡುಗಡೆ ಮಾಡಿ ಅವರು ಮಾತನಾಡಿದರು.

ರೈತರು ಬೆಳೆದ ದವಸ ಧಾನ್ಯ, ತರಕಾರಿ ಹಣ್ಣುಗಳನ್ನು ಮಾರುಕಟ್ಟೆಗೆ ತಂದವರಿಂದ ಖರೀದಿಸಿ ಮಾರಾಟ ಮಾಡಿ ರೈತನಿಗೆ ಪೂರಕವಾಗಿ ದುಡಿಯುವ ತರಕಾರಿ ಮಾರಾಟದ ಬದುಕು ಸಹ ಗೌರವಯುತವಾದುದು ಎಂಬುದನ್ನು ಮಕ್ಕಳಿಗೆ ಬಾಲ್ಯದಿಂದಲೇ ಕಲಿಸುವ ಅಗತ್ಯವಿದೆ.

ಮಾರುಕಟ್ಟೆಯ ರೀತಿ ನೀತಿಗಳನ್ನು ಮಕ್ಕಳಿಗೆ ಕಲಿಸಿಕೊಡುವ ಉದ್ದೇಶದಿಂದ ಇಲ್ಲಿ ನಡೆಸಿರುವ ಮಾರುಕಟ್ಟೆ ಮೇಳ ಹೊಸದೊಂದು ಕಲ್ಪನೆಯಾಗಿದೆ. ಮಕ್ಕಳಿಂದ ತಾಜಾ ತರಕಾರಿ ಖರೀದಿಸಿದ್ದು ತುಂಬ ಸಂತಸ ತಂದಿದೆ ಎಂದರು.

ADVERTISEMENT

ಶಾಲಾ ಪ್ರಾಂಶುಪಾಲೆ ಕೆ.ಟಿ.ವರಲಕ್ಷ್ಮೀ ಮಾತನಾಡಿ ಎಲ್ಲಾ ಕುಲಕಸುಬುಗಳು ಕಣ್ಮರೆಯಾದರೆ, ಪೂರ್ವಜರ ಜನಪದ ಸಂಸ್ಕೃತಿಯ ಕಲ್ಪನೆ ಮಕ್ಕಳಿಗೆ ತಲುಪುವುದಿಲ್ಲ ಎಂಬ ಉದ್ದೇಶದಿಂದ ಮಾರುಕಟ್ಟೆ ಮೇಳ ನಡೆಸಲಾಗುತ್ತಿದೆ ಎಂದು ಹೇಳಿದರು.

ಖ್ಯಶಿಕ್ಷಕ ಯು, ನರಸಿಂಹ ಮೂರ್ತಿ ಮಾತನಾಡಿದರು. ತಿಗಳ ಸಮುದಾಯದ ನರಸಿಂಹ ಮೂರ್ತಿ, ಶಾಲೆಯ ಶಿಕ್ಷಕರು, ಸಿಬ್ಬಂದಿ, ಪೋಷಕರು, ಮಕ್ಕಳು, ಐಟಿಐ ಕಾಲೇಜಿನ ವಿದ್ಯಾರ್ಥಿಗಳು ತರಕಾರಿ ಖರೀದಿಸಿದರು. ಮಾರುಕಟ್ಟೆ ಮೇಳದಲ್ಲಿ ತಾಜಾ ತರಕಾರಿ, ಹೂವು, ಹಣ್ಣು ಹಂಪಲು ಮಾರಾಟ ಮಾಡಿದ ಮಕ್ಕಳು ಉತ್ಸಾಹದಿಂದ ತರಕಾರಿ ವ್ಯಾಪಾರದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.