ADVERTISEMENT

ಪತಿ ವಿರುದ್ಧ ದೂರು ನೀಡಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2017, 10:18 IST
Last Updated 11 ಏಪ್ರಿಲ್ 2017, 10:18 IST

ಕುಣಿಗಲ್: ಪತಿಯ ವಿರುದ್ಧ ತಾವು ನೀಡಿರುವ ದೂರನ್ನು ದಾಖಲಿಸದಂತೆ ಮನವಿ ಮಾಡಿ ಠಾಣೆಯಿಂದ ಹೊರ ಹೋದ ಮಹಿಳೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಲ್ಲೂಕಿನ ಹೆಗ್ಗಡತಿಹಳ್ಳಿ ವಾಸಿ ವನಿತಾ (25) ಮೃತರು. ಪತಿ ಸುರೇಶ್‌ ಕೆಲದಿನಗಳಿಂದ ದೂರವಾಗಿದ್ದರು. ಈ ಬಗ್ಗೆ ವನಿತಾ ದೂರು ನೀಡಿದ್ದು, ಪೊಲೀಸರು ಆಪ್ತ ಸಮಾಲೋಚನೆಗೆ ಶಿಫಾರಸು ಮಾಡಿದ್ದರು.

ಶನಿವಾರ ಪೊಲೀಸರು ಸುರೇಶ್‌ನನ್ನು ಕರೆತಂದು ವಿಚಾರಣೆ ನಡೆಸುವಾಗ ಠಾಣೆಗೆ ಹೋದ ಪತ್ನಿ, ದೂರು ದಾಖಲಿಸದಂತೆ ಮನವಿ ಮಾಡಿದ್ದರು. ಕೆಲ ಸಮಯದ ಬಳಿಕ ಸಾರ್ವಜನಿಕ ಆಸ್ಪತ್ರೆ ಬಳಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆಟೊ ಚಾಲಕ ಮಂಜು ಎಂಬುವರು ಆಸ್ಪತ್ರೆಗೆ ದಾಖಲಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.